HEALTH TIPS

ಸಾರಿಗೆ ಇಲಾಖೆ ಕೆಟ್ಟ ಹೆಸರನ್ನು ಬದಲಾಯಿಸಲು ಆಂತರಿಕ ಜಾಗೃತ ಇಲಾಖೆ ರಚನೆಗೆ ಶಿಫಾರಸು

ತಿರುವನಂತಪುರಂ: ಸಾರಿಗೆ ಇಲಾಖೆಯು ಲಂಚಕೋರರ ಕೇಂದ್ರ ಸ್ಥಾನ ಎಂಬ ಖ್ಯಾತಿಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ.


ಲಂಚ ಪ್ರಕರಣಗಳಲ್ಲಿ ಅಧಿಕಾರಿಗಳ ಆಗಾಗ್ಗೆ ಬಂಧನಗಳು ಇಲಾಖೆಯನ್ನು ಇರಿಸುಮುರಿಸಿಗೊಳಪಡಿಸಿದ್ದು,  ಸ್ವಚ್ಛಗೊಳಿಸುವ ಪ್ರಯತ್ನಗಳಿಗೆ ವೇಗ ನೀಡಲಾಗಿದೆ. ಇದಕ್ಕಾಗಿ ಸಾರಿಗೆ ಆಯುಕ್ತ ಎಚ್. ನಾಗರಾಜು ಅವರ ಶಿಫಾರಸ್ಸು, ಲಂಚವನ್ನು ತಮ್ಮ ಹಕ್ಕು ಎಂದು ಪರಿಗಣಿಸುವ ಅಧಿಕಾರಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಆಂತರಿಕ ಜಾಗೃತ ವಿಭಾಗವನ್ನು ಪ್ರಾರಂಭಿಸುವುದು. ಈ ಶಿಫಾರಸನ್ನು ಇಲಾಖೆಯ ಕಾರ್ಯದರ್ಶಿಗೆ ಕಳುಹಿಸಲಾಗಿದೆ. ಇತ್ತೀಚೆಗೆ ಎರ್ನಾಕುಳಂ ಆರ್‍ಟಿಒ ಲಂಚ ಪ್ರಕರಣದಲ್ಲಿ ಭಾಗಿಯಾಗಿರುವುದು ಇಲಾಖೆಗೆ ದೊಡ್ಡ ಮುಜುಗರವನ್ನುಂಟು ಮಾಡಿತು. ಆರ್‍ಟಿ ಕಚೇರಿಯ ಸುತ್ತ ಕೆಲಸ ಮಾಡುವ ಏಜೆಂಟರನ್ನು ತೆಗೆದುಹಾಕಿದರೆ ಅರ್ಧದಷ್ಟು ಸಮಸ್ಯೆ ಬಗೆಹರಿಯುತ್ತದೆ ಎಂದು ಅಂದಾಜಿಸಲಾಗಿದೆ. ಆಂತರಿಕ ಜಾಗೃತ ಇಲಾಖೆಯಲ್ಲಿ ಸೇರಿಸಿಕೊಳ್ಳಲು ಅತ್ಯುತ್ತಮ ಸೇವೆ ಸಲ್ಲಿಸುವ ಅಧಿಕಾರಿಗಳನ್ನು ಹುಡುಕಲು ಇಲಾಖೆ ಪ್ರಯತ್ನಿಸುತ್ತಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries