ಪೆರ್ಲ: ಕಾಟುಕುಕ್ಕೆ ಸನಿಹದ ಖಂಡೇರಿ ಶ್ರೀ ಅಶ್ವತ್ಥಕಟ್ಟೆ ಸೆವಾ ಸಮಿತಿ ವತಿಯಿಂದ 'ಅಶ್ವತ್ಥ ಸಿರಿ-2025'ಕಾರ್ಯಕ್ರಮ ಮಾ. 15ರಂದು ಖಂಡೇರಿಯಲ್ಲಿ ಜರುಗಲಿದೆ. ಅಂದು ಬೆಳಗ್ಗೆ 7ಕ್ಕೆ ಗಣಪತಿ ಹವನ, ಸಂಜೆ 5.30ಕ್ಕೆ ಸಾಮೂಹಿಕ ಶ್ರೀ ಶನೈಶ್ಚರ ಪೂಜೆ, ರಾತ್ರಿ 9ರಿಂದ ಪೆರ್ಡೂರು ಶ್ರೀ ಅನಂತಪದ್ಮನಾಭ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ 'ಚಕ್ರ ಚಂಡಿಕೆ-ರತ್ನಾವತೀ ಕಲ್ಯಾಣ'ಕಾಲಮಿತಿ ಯಕ್ಷಗಾನ ಬಯಲಾಟ ಜರುಗಲಿರುವುದು.

