ತಿರುವನಂತಪುರಂ: ಸಿಪಿಎಂನ ಹೊಸ ಪ್ರಧಾನ ಕಚೇರಿ ಕಟ್ಟಡದ ಉದ್ಘಾಟನೆ ಏಪ್ರಿಲ್ 23 ರಂದು ನಡೆಯಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಟ್ಟಡವನ್ನು ಉದ್ಘಾಟಿಸಲಿದ್ದಾರೆ ಎಂದು ರಾಜ್ಯ ಕಾರ್ಯದರ್ಶಿ ಎಂ.ವಿ ಗೋವಿಂದನ್ ಹೇಳಿರುವರು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಭ ದಿನವೆಂದರೆ ಮೇಷ ಅಥವಾ ವೃಷಭ ಮಾಸದ ಹತ್ತನೇ ದಿನ. ಆ ದಿನ, ಸೂರ್ಯನು ತನ್ನ ಉತ್ತುಂಗವನ್ನು ತಲುಪುತ್ತಾನೆ. ಇದು ಸೂರ್ಯನು ಅತ್ಯಂತ ಪ್ರಬಲವಾಗಿರುವ ದಿನವೂ ಆಗಿದೆ. ಈ ದಿನ ಶುಭ ಕಾರ್ಯಕ್ರಮಗಳಿಗೆ ಸೂಕ್ತ ಎಂದು ನಂಬಲಾಗಿದೆ. ದೀರ್ಘಕಾಲದವರೆಗೆ ಮುಂದೂಡಲ್ಪಟ್ಟ ಯಾವುದೇ ಒಳ್ಳೆಯ ವಿಷಯವಿದ್ದರೆ, ಅದನ್ನು ಪ್ರಾರಂಭಿಸಲು ಹತ್ತನೇ ದಿನವು ಅತ್ಯಂತ ಸೂಕ್ತ ದಿನ ಎಂಬ ನಂಬಿಕೆ ಇದೆ ಎಂದವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಹೊಸ ಕಟ್ಟಡವು ಪ್ರಸ್ತುತ ಪ್ರಧಾನ ಕಚೇರಿಯಾದ ಪಾಳಯಂನಲ್ಲಿರುವ ಇಕೆಜಿ ಕೇಂದ್ರದ ಎದುರು ಇದೆ. 9 ಅಂತಸ್ತಿನ ಕಟ್ಟಡವು 32 ಸೆಂಟ್ನಲ್ಲಿದೆ. ಪ್ರಧಾನ ಕಚೇರಿ ಕಟ್ಟಡಕ್ಕೆ ಕೇಸರಿ ಬಣ್ಣ ಬಳಿಯಲಾಗಿದೆ. ಪಕ್ಷದ ಬಣ್ಣ ಕೆಂಪು ಬಣ್ಣದ್ದೇ ಎಂದು ಮಾಧ್ಯಮದವರು ಕೇಳಿದಾಗ, ಯಾರಾದರೂ ಕಟ್ಟಡಕ್ಕೆ ಕೆಂಪು ಬಣ್ಣ ಬಳಿದರೆ ಅದು ಸಕಾರಾತ್ಮಕ ಶಕ್ತಿಯನ್ನು ಉತ್ಪಾದಿಸುವುದಿಲ್ಲ ಎಂದು ಎಂ.ವಿ. ಗೋವಿಂದನ್ ಉತ್ತರಿಸಿದರು.





