HEALTH TIPS

7ನೇ ಹಣಕಾಸು ಆಯೋಗದಿಂದ ಜಿಲ್ಲೆಯ ಸ್ಥಳೀಯಾಡಳಿತ ಪ್ರತಿನಿಧಿಗಳೊಂದಿಗೆ ಚರ್ಚೆ

ಕಾಸರಗೋಡು: ಏಳನೇ ರಾಜ್ಯ ಹಣಕಾಸು ಆಯೋಗದ ವರದಿ ಸಲ್ಲಿಕೆಗೂ ಮುನ್ನ ಸ್ಥಳೀಯಾಡಳಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಅಭಿಪ್ರಾಯ ಸಂಗ್ರಹಿಸಲು ಹಣಕಾಸು ಆಯೋಗದ ಅಧ್ಯಕ್ಷ ಡಾ.ಕೆ.ಎನ್.ಹರಿಲಾಲ್ ಜಿಲ್ಲೆಗೆ ಭೇಟಿ ನೀಡಿದರು. ಆಯೋಗದ ಸದಸ್ಯ ಕಾರ್ಯದರ್ಶಿ ಡಿ ಅನಿಲ್ ಪ್ರಸಾದ್ ಮತ್ತು ಹಣಕಾಸು ಆಯೋಗದ ಸಲಹೆಗಾರ ಡಾ ಕೆ ಕೆ ಹರಿಕುರುಪ್ ಕೂಡ ಅಧ್ಯಕ್ಷರೊಂದಿಗೆ ಉಪಸ್ಥಿತರಿದ್ದರು. ಡಿಪಿಸಿ ಅಧ್ಯಕ್ಷೆ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾನವದೂರು ಪಾದೂರು, ಡಿಪಿಸಿ ಸದಸ್ಯರಾದ ಎಸ್.ಎನ್.ಸರಿತಾ, ಕೆ.ಶಕುಂತಲಾ, ಜಾಸ್ಮಿನ್ ಕಬೀರ್, ಎಂ.ರೀತಾ, ಕಾಞಂಗಾಡ್ ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತ, ಗ್ರಾಮ ಪಂಚಾಯತ್ ಅಧ್ಯಕ್ಷರುಗಳಾದ ಟಿ.ಕೆ.ರವಿ, ಎ.ಪಿ.ಉಷಾ, ಎಂ.ಕುಮಾರನ್, ಖಾದರ್ ಬದ್ರಿಯಾ, ವಿ.ವಿ.ಸಜೆವನ್, ಎಂ.ಧನ್ಯ, ಜೆ.ಎಸ್.ಸೋಮಶೇಖರ, ಜೀನ್ ಲೆವಿನ್ ಮೊಂತೆರೊ, ಜಿಲ್ಲಾ ಯೋಜನಾಧಿಕಾರಿ ಟಿ ರಾಜೇಶ್, ಸ್ಥಳೀಯಾಡಳಿತ ಇಲಾಖೆ ಜಂಟಿ ನಿರ್ದೇಶಕ ಜಿ ಸುಧಾಕರನ್ ಮತ್ತಿತರರು ಭಾಗವಹಿಸಿದ್ದರು.

ಅಧ್ಯಕ್ಷ ಡಾ.ಕೆ.ಎನ್.ಹರಿಲಾಲ್ ಮಾತನಾಡಿ, ಜನಪ್ರತಿನಿಧಿಗಳು ನೀಡುವ ಸಲಹೆಗಳನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ  ಸ್ಥಳೀಯ ಸಂಸ್ಥೆಗಳು ಉತ್ತಮವಾಗಿ ಅನುμÁ್ಠನಗೊಳಿಸಬೇಕಾದ ವಿಷಯಗಳನ್ನು ಹಣಕಾಸು ಆಯೋಗವು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದೆ ಎಂದು ಹೇಳಿದರು.

ಸಂವಿಧಾನದ ಪ್ರಕಾರ, ಪ್ರತಿ ರಾಜ್ಯದಲ್ಲಿ ಐದು ವರ್ಷಗಳಿಗೊಮ್ಮೆ ರಾಜ್ಯ ಹಣಕಾಸು ಆಯೋಗವನ್ನು ನೇಮಿಸಲಾಗುತ್ತದೆ. ಇದಕ್ಕೆ ಕೇರಳ ಮಾದರಿಯಾಗಿದೆ. ಹಣಕಾಸು ಆಯೋಗವನ್ನು ನಿಯಮಿತವಾಗಿ ನೇಮಕ ಮಾಡಲಾಗಿದೆ. ಅಧ್ಯಕ್ಷರು, ಹಣಕಾಸು ಇಲಾಖೆಯ ಕಾರ್ಯದರ್ಶಿ ಮತ್ತು ಸ್ಥಳೀಯಾಡಳಿತ  ಕಾರ್ಯದರ್ಶಿ ಸದಸ್ಯರು. ಇಲ್ಲಿಯವರೆಗೆ, ಎಲ್ಲಾ ಹಣಕಾಸು ಆಯೋಗಗಳು ತಮ್ಮ ವರದಿಗಳನ್ನು ಸಕಾಲಿಕವಾಗಿ ಸಲ್ಲಿಸಿವೆ. ಸರ್ಕಾರಗಳು ಶಿಫಾರಸುಗಳನ್ನು ಜಾರಿಗೆ ತಂದಿವೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries