HEALTH TIPS

ಪರಿಸರ ಪ್ರವಾಸೋದ್ಯಮಕ್ಕೆ ಹೊಸ ಪಾಠಗಳು; ರಾಣಿಪುರಂನಲ್ಲಿ ತರಬೇತಿ ಆಯೋಜನೆ

ಕಾಸರಗೋಡು: ಕೇರಳ ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ನೇತೃತ್ವದಲ್ಲಿ ಮಾಲಿನ್ಯ ಮುಕ್ತ ನವ ಕೇರಳ ಅಭಿಯಾನದ ಭಾಗವಾಗಿ, ಅರಣ್ಯ ಸಂರಕ್ಷಣಾ ಸಮಿತಿಯ ಸದಸ್ಯರು, ಅರಣ್ಯ ಇಲಾಖೆ ಅಧಿಕಾರಿಗಳು, ಸಾರ್ವಜನಿಕ ಪ್ರತಿನಿಧಿಗಳು ಮತ್ತು ಹಸಿರು ಕೇರಳ ಮಿಷನ್ ಸದಸ್ಯರಿಗೆ ರಾಣಿಪುರಂನ ಪರಿಸರ ಪ್ರವಾಸೋದ್ಯಮ ಕೇಂದ್ರದಲ್ಲಿ ತರಬೇತಿಯನ್ನು ಆಯೋಜಿಸಲಾಗಿತ್ತು. ವಿಭಾಗೀಯ ಅರಣ್ಯ ಅಧಿಕಾರಿ ಕೆ. ಅಶ್ರಫ್ ಕಾರ್ಯಕ್ರಮ ಉದ್ಘಾಟಿಸಿದರು. ರಾಣಿಪುರಂನಲ್ಲಿ ನಡೆದ ತರಬೇತಿಯ ಅಧ್ಯಕ್ಷತೆಯನ್ನು ಪನತ್ತ್ತಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪ್ರಸನ್ನ ಪ್ರಸಾದ್ ವಹಿಸಿದ್ದರು. ವಿಭಾಗೀಯ ಅರಣ್ಯ ಅಧಿಕಾರಿ ಕೆ. ಅಶ್ರಫ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಪಾಧ್ಯಕ್ಷ ಪಿ.ಎಂ. ಕುರಿಯಾಕೋಸ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಪ್ರಿಯಾ ಶಿವದಾಸ್, ಪಂಚಾಯತಿ ಸದಸ್ಯೆ ಸಜಿನಿ ಸೌಮ್ಯ ಮೋಲ್, ಹಸಿರು ಕೇರಳಂ ಮಿಷನ್ ಜಿಲ್ಲಾ ಸಂಯೋಜಕ ಕೆ. ಬಾಲಕೃಷ್ಣನ್, ಪಂಚಾಯತಿ ಕಾರ್ಯದರ್ಶಿ ಕೆ. ವಿಜಯಕುಮಾರ್, ಮತ್ತು ಅರಣ್ಯ ಸಂರಕ್ಷಣಾ ಸಮಿತಿ ಅಧ್ಯಕ್ಷ ಎಸ್. ಮಧುಸೂದನನ್ ಮಾತನಾಡಿದರು. ವಿಭಾಗ ಅರಣ್ಯ ಅಧಿಕಾರಿ ಬಿ. ಶೇಷಪ್ಪ ಸ್ವಾಗತಿಸಿ,  ವಿಎಸ್.ಎಸ್. ಜಿಲ್ಲಾ ಸಂಯೋಜಕ ಕೆ. ಎನ್. ರಮೇಶ್ ವಂದಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ವಿಮಲ್‍ರಾಜ್ ಕೆ. ಬಾಲಚಂದ್ರನ್ ಮತ್ತು ಕೆ.ಕೆ. ರಾಘವನ್ ತರಗತಿಯನ್ನು ನಡೆಸಿಕೊಟ್ಟರು.

ಸ್ವಚ್ಛ, ಸುಂದರ ಮತ್ತು ಸುಸ್ಥಿರ ಕೇರಳಕ್ಕಾಗಿ ತ್ಯಾಜ್ಯ ಮುಕ್ತ ನವ ಕೇರಳ ಅಭಿಯಾನದ ಭಾಗವಾಗಿ ರಾಜ್ಯಾದ್ಯಂತ ವ್ಯಾಪಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಇದನ್ನು ಅನುಸರಿಸಿ, ಪ್ರವಾಸೋದ್ಯಮ ಕೇಂದ್ರಗಳನ್ನು ಹಸಿರು ಮಾನದಂಡಗಳಿಗೆ ಅನುಸಾರವಾಗಿ ನಿರ್ವಹಿಸಲು ಸೂಚನೆಗಳನ್ನು ಜಾರಿಗೆ ತರಲಾಗುತ್ತಿದೆ. ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ನಿಯಂತ್ರಣದಲ್ಲಿರುವ ಪರಿಸರ ಪ್ರವಾಸೋದ್ಯಮ ಕೇಂದ್ರಗಳನ್ನು ಸುಸ್ಥಿರವಾಗಿ ಸ್ವಚ್ಛಗೊಳಿಸಲು ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಸ್ಥಳೀಯ ಸರ್ಕಾರಿ ಸಂಸ್ಥೆಗಳು ಜಾರಿಗೊಳಿಸುವ ಸಮಗ್ರ ನೈರ್ಮಲ್ಯ ಚಟುವಟಿಕೆಗಳನ್ನು ಉತ್ತೇಜಿಸುವ ಅಭಿಯಾನದ ಭಾಗವಾಗಿ ಇಂತಹ ತರಬೇತಿ ಆಯೋಜಿಸಲಾಗಿತ್ತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries