HEALTH TIPS

ಪಶ್ಚಿಮ ಬಂಗಾಳದಲ್ಲಿ ಭುಗಿಲೆದ್ದಿದ್ದ ಹಿಂಸಾಚಾರ: ಸಹಜ ಸ್ಥಿತಿಯತ್ತ ಮುರ್ಶಿದಾಬಾದ್‌

ಕೋಲ್ಕತ್ತ: ಪಶ್ಚಿಮ ಬಂಗಾಳದ ಹಿಂಸಾಚಾರಪೀಡಿತ ಮುರ್ಶಿದಾಬಾದ್‌ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ.

ಮನೆ ತೊರೆದು ಹೋಗಿದ್ದ ಕುಟುಂಬಗಳು ಹಿಂತಿರುಗುತ್ತಿವೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಜಾವೆದ್ ಶಮಿಮ್ ಸೋಮವಾರ ತಿಳಿಸಿದ್ದಾರೆ.

ವಕ್ಫ್‌ (ತಿದ್ದುಪಡಿ) ಕಾಯ್ದೆ ವಿರೋಧಿ ಹಿಂಸಾಚಾರಕ್ಕೆ ಶುಕ್ರವಾರದ ನಂತರ ಮುರ್ಶಿದಾಬಾದ್‌ನ ಸೂಟಿ, ಧುಲಿಯಾನ್‌, ಸಮ್ಸರ್‌ಗಂಜ್ ಮತ್ತು ಜಾಂಗಿಪುರ್‌ನಲ್ಲಿ ಮೂವರು ಸಾವಿಗೀಡಾಗಿ, ಹಲವರು ಗಾಯಗೊಂಡಿದ್ದರು. ನೂರಾರು ಜನರು ಮನೆ ತೊರೆದಿದ್ದರು.

'ಘಟನೆ ಸಂಬಂಧ 210 ಮಂದಿಯನ್ನು ಬಂಧಿಸಲಾಗಿದೆ. ಮಾಲ್ಡಾ ಮತ್ತು ಮುರ್ಶಿದಾಬಾದ್ ಜಿಲ್ಲಾಡಳಿತಗಳು ಇಲ್ಲಿನ ನಾಗರಿಕರ ಸುರಕ್ಷಿತ ವಾಪಸಾತಿಗೆ ಪ್ರಯತ್ನಿಸುತ್ತಿವೆ. 19 ಕುಟುಂಬಗಳು ವಾಪಸಾಗಿವೆ' ಎಂದು ಎಡಿಜಿಪಿ ಶಮಿಮ್‌ ಮನವಿ ಮಾಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries