HEALTH TIPS

ಸಿಬಿಐ ತನಿಖೆ ಅಗತ್ಯ; ಸುಪ್ರೀಂ ಕೋರ್ಟ್‍ನಲ್ಲಿ ನವೀನ್ ಬಾಬು ಪತ್ನಿ ಮನವಿ

ನವದೆಹಲಿ: ಕಣ್ಣೂರು ಎಡಿಎಂ ನವೀನ್ ಬಾಬು ಅವರ ಪತ್ನಿ ಮಂಜುಷಾ ಅವರು ಮೃತರ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

ಪ್ರಸ್ತುತ ಪೋಲೀಸ್ ತನಿಖೆಯಲ್ಲಿ ತನಗೆ ನಂಬಿಕೆ ಇಲ್ಲ ಎಂದು ಮಂಜುಷಾ ಸಲ್ಲಿಸಿರುವ ಅರ್ಜಿಯಲ್ಲಿ ವಿನಂತಿಸಿದ್ದಾರೆ. 

ಕೇರಳ ಪೋಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಬೇಕು ಎಂಬ ನಿಲುವನ್ನು ಹೈಕೋರ್ಟ್ ತೆಗೆದುಕೊಂಡಿತು. ವಿಭಾಗೀಯ ಪೀಠವೂ ಇದನ್ನೇ ಪುನರುಚ್ಚರಿಸಿತು. ನಂತರ ಕುಟುಂಬವು ಸುಪ್ರೀಂ ಕೋರ್ಟ್‍ಗೆ ಮೊರೆ ಹೋಗಲು ನಿರ್ಧರಿಸಿತು. ಸಿಪಿಎಂ ನಾಯಕಿ ಪಿಪಿ ದಿವ್ಯಾ ಆರೋಪಿಯಾಗಿರುವ ಪ್ರಕರಣದ ಬಗ್ಗೆ ಯಾವುದೇ ಪರಿಣಾಮಕಾರಿ ತನಿಖೆ ನಡೆದಿಲ್ಲ ಎಂದು ನವೀನ್ ಅವರ ಕುಟುಂಬ ಆರೋಪಿಸಿದೆ.

ದಿವ್ಯಾ ಅವರ ಭ್ರಷ್ಟಾಚಾರ ಆರೋಪಗಳಲ್ಲಿ ದೂರುದಾರರಾಗಿರುವ ಪ್ರಶಾಂತ್ ವಿರುದ್ಧ ಯಾವುದೇ ತನಿಖೆ ನಡೆಸುತ್ತಿಲ್ಲ ಎಂದು ಮಂಜುಷಾ ಅರ್ಜಿಯಲ್ಲಿ ತಿಳಿಸಿದ್ದರು. ನವೀನ್ ಸಾವಿಗೆ ಕಾರಣವನ್ನು ಪತ್ತೆಮಾಡಲು ಮತ್ತು ಅಪರಾಧಿಗಳನ್ನು ನ್ಯಾಯದ ಕಟಕಟೆಗೆ ತರಲು ಕುಟುಂಬವು ಯಾವುದೇ ಹಂತಕ್ಕೆ ಹೋಗಲು ದೃಢನಿಶ್ಚಯ ಹೊಂದಿದೆ. ಸುಪ್ರೀಂ ಕೋರ್ಟ್ ಈ ವಾರವೇ ಅರ್ಜಿಯನ್ನು ಪರಿಗಣಿಸಬಹುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries