HEALTH TIPS

ನಿಲಂಬೂರಿನಲ್ಲಿ ಆರ್ಯಾಡನ್ ಶೌಕತ್ ಯುಡಿಎಫ್ ಅಭ್ಯರ್ಥಿ.

ತಿರುವನಂತಪುರಂ: ನಿಲಂಬೂರ್ ಉಪಚುನಾವಣೆಯಲ್ಲಿ ಆರ್ಯಾಡನ್ ಶೌಕತ್ ಯುಡಿಎಫ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಎಐಸಿಸಿ ಅಧಿಕೃತವಾಗಿ ಈ ಬಗ್ಗೆ ಘೋಷಿಸಿದೆ.

ಕೆ.ಸಿ.ವೇಣುಗೋಪಾಲ್ ಸಹಿ ಮಾಡಿದ ಟಿಪ್ಪಣಿಯನ್ನು ಬಿಡುಗಡೆ ಮಾಡಲಾಗಿದೆ. ಕೆಪಿಸಿಸಿ ನೀಡಿದ ಹೆಸರನ್ನು ಎಐಸಿಸಿ ಒಪ್ಪಿಕೊಂಡು ಅನುಮೋದಿಸಿದೆ.


ಮಲಪ್ಪುರಂ ಡಿಸಿಸಿ ಅಧ್ಯಕ್ಷ ವಿ.ಎಸ್. ಜಾಯ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕೆಂಬ ಪಿ.ವಿ. ಅನ್ವರ್ ಅವರ ಬೇಡಿಕೆಯನ್ನು ಯುಡಿಎಫ್ ಪರಿಗಣಿಸಲಿಲ್ಲ. ನಿಲಂಬೂರಿನಲ್ಲಿ ಆರ್ಯಾಡನ್ ಶೌಕಮ್ ವಿಧಾನಸಭಾ ಚುನಾವಣೆಯಲ್ಲಿ ಇದು ಎರಡನೇ ಬಾರಿಗೆ. ಮೊದಲ ಸ್ಪರ್ಧೆ 2016 ರಲ್ಲಿ ನಡೆದಿತ್ತು. ಪ್ರಸ್ತುತ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಆರ್ಯಾಡನ್ ಶೌಕತ್, ರಾಜಕೀಯದ ಜೊತೆಗೆ ಚಲನಚಿತ್ರ ಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಸ್ಥಾನವನ್ನು ಕಂಡುಕೊಂಡಿದ್ದಾರೆ. ನಿಲಂಬೂರು ನಗರಸಭೆಯಾದಾಗ ಅವರು ಮೊದಲ ಅಧ್ಯಕ್ಷರಾಗಿದ್ದರು.

ನೀಲಂಬೂರ್ ನ್ನು ಆರ್ಯಾಡನ್ ಮುಹಮ್ಮದ್ 34 ವರ್ಷಗಳ ಕಾಲ ಕೋಟೆಯಾಗಿ ಉಳಿಸಿಕೊಂಡಿದ್ದ ಕ್ಷೇತ್ರ. ಪಿ.ವಿ. ಅನ್ವರ್ ವಶಪಡಿಸಿಕೊಂಡ ಕ್ಷೇತ್ರವನ್ನು ಮರಳಿ ಪಡೆಯಲು ಯುಡಿಎಫ್ ಈ ಉಪಚುನಾವಣೆಯಲ್ಲಿ ಆರ್ಯಾಡನ್ ಅವರ ಮಗನನ್ನು ಕಣಕ್ಕಿಳಿಸುತ್ತಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries