HEALTH TIPS

ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಯಕ್ಷಗಾನ ತಾಳಮದ್ದಳೆ

ಮುಳ್ಳೇರಿಯ: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ  ವಿದ್ಯಾಶ್ರೀ ಆಚಾರ್ಯ ಈಶ್ವರಮಂಗಲ ಮತ್ತು ಮನೆಯವರ ವತಿಯಿಂದ ಸಂಯೋಜಿಸಲ್ಪಟ್ಟ ಈ ವಿಶೇಷ ಕಲಾ ಸೇವೆ ಶನಿವಾರ ನಡೆಯಿತು. ಮೊದಲಿಗೆ ಸ್ಥಳ ಸಾನ್ನಿಧ್ಯ ಶ್ರೀ ಗೋಪಾಲಕೃಷ್ಣದೇವರಿಗೆ ಪೂಜಾರ್ಚನೆ ಸಲ್ಲಿಸಲಾಯಿತು. ಶೀರಾಮ ಗೀತಾಭ್ಯಾಸ ತಂಡ ಹಾಗೂ ಪೂರ್ಣಿಮಾ ಬನಾರಿ ಅವರ ಸಹಭಾಗಿತ್ವದಲ್ಲಿ ಭಗವದ್ಗೀತೆ ಪಾರಾಯಣ ನಡೆಯಿತು.


ಬಳಿಕ ಹಿರಿಯ ಭಾಗವತ ಗುರುಗಳಾದ ವಿಶ್ವವಿನೋದ ಬನಾರಿ ಅವರ ನಿರ್ದೇಶನದಲ್ಲಿ ಪಾರ್ತಿಸುಬ್ಬ ವಿರಚಿತ ಪಂಚವಟಿ ಯಕ್ಷಗಾನ ತಾಳಮದ್ದಳೆ ಜರಗಿತು. ಭಾಗವತರಾಗಿ ಮೋಹನ ಮೆಣಸಿನಕಾನ, ಕುಮಾರಿ ವಿದ್ಯಾಶ್ರೀ ಆಚಾರ್ಯ ಈಶ್ವರಮಂಗಲ, ಕುಮಾರಿ ರಂಜಿತಾ ಆಚಾರ್ಯ ನಾರ್ಣಕಜೆ ಭಾಗವಹಿಸಿದ್ದರು. ಚೆಂಡೆಮದ್ದಳೆಯಲ್ಲಿ ಶ್ರೀಧರ ಆಚಾರ್ಯ ಈಶ್ವರಮಂಗಲ,  ಮಂಡೆಕೂಲು ಅಪ್ಪಯ್ಯ ಮಣಿಯಾಣಿ, ವಿಷ್ಣು ಶರಣ ಬನಾರಿ, ಕೃಷ್ಣ ಪ್ರಸಾದ ಬೆಳ್ಳಿಪ್ಪಾಡಿ, ಸದಾನಂದ ಮಯ್ಯಾಳ ಸಹಕರಿಸಿದರು. ಅರ್ಥಧಾರಿಗಳಾಗಿ  ನಾರಾಯಣ ದೇಲಂಪಾಡಿ, ಪ್ರಭಾಕರ ಆಚಾರ್ಯ ಹಿರಿಯಾಣ, ಭಾಸ್ಕರ ಮಾಸ್ತರ್ ದೇಲಂಪಾಡಿ, ನಾರಾಯಣ ಪಾಟಾಳಿ ಪಯ್ಯಾಳ, ಪೂಜಾ ಸಿ.ಎಚ್ ದೇಲಂಪಾಡಿ, ಶ್ರೀದೇವ್ ಆಚಾರ್ಯ ಈಶ್ವರಮಂಗಲ, ಶಾಂತಾಕುಮಾರಿ ದೇಲಂಪಾಡಿ, ಬಿ.ಎಚ್. ವೆಂಕಪ್ಪ ಗೌಡ, ಸಂಜೀವ ರಾವ್ ಮಯ್ಯಾಳ, ಪದ್ಮನಾಭ ಮಯ್ಯಾಳ ಪಾತ್ರ ನಿರ್ವಹಿಸಿದರು. ಪೂಜಾ ಸಿ.ಎಚ್ ನಿರೂಪಿಸಿದರು, ನಂದ ಕಿಶೋರ ಬನಾರಿ ವಂದಿಸಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries