ಕೊಲ್ಲಂ: ಐಷಾರಾಮಿ ಹೋಟೆಲ್ನಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಆರೋಪದ ಮೇಲೆ ನಟ ವಿನಾಯಕನ್ ಅವರನ್ನು ಪೋಲೀಸರು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ನಟನನ್ನು ಅಂಚಲುಮೂಡು ಪೋಲೀಸರು ವಶಕ್ಕೆ ಪಡೆದರು.
ವಿನಾಯಕನ್ ಪೋಲೀಸ್ ಅಧಿಕಾರಿಗಳನ್ನು ನಿಂದಿಸಿ, ಪೋಲೀಸ್ ಠಾಣೆಯಿಂದ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ನಾಲ್ಕು ಗಂಟೆಗಳ ನಂತರ ವಿನಾಯಕನ್ ಅವರನ್ನು ಅಂತಿಮವಾಗಿ ಬಿಡುಗಡೆ ಮಾಡಲಾಯಿತು.
ವಿನಾಯಕನ್ ಸಿನಿಮಾ ಶೂಟಿಂಗ್ ಗಾಗಿ ಕೊಲ್ಲಂಗೆ ಬಂದಿದ್ದರು. ಚಿತ್ರೀಕರಣ ಮುಗಿಸಿ ವಿನಾಯಕನ್ ವಿಶ್ರಾಂತಿ ಪಡೆಯುತ್ತಿದ್ದಾಗ, ಅವರ ಮ್ಯಾನೇಜರ್ ಕುಡಿದು ಗಲಾಟೆ ಮಾಡಲು ಪ್ರಾರಂಭಿಸಿದರು. ಇದನ್ನು ಕೇಳಲು ನಟ ಮಧ್ಯಪ್ರವೇಶಿಸಿದರು. ನಂತರ ಅವರು ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದರು. ಏತನ್ಮಧ್ಯೆ, ಹೋಟೆಲ್ಗೆ ಬಂದ ಮಹಿಳೆಯರು ಮತ್ತು ಮಕ್ಕಳನ್ನು ಬೈಯ್ಯಲು ಪ[ರಾರಂಭಿಸಿದರು. ಹೋಟೆಲ್ ಅಧಿಕಾರಿಗಳು ಮಾಹಿತಿ ನೀಡಿದ ನಂತರ, ಪೋಲೀಸರು ಆಗಮಿಸಿ ವಿನಾಯಕನ್ ಅವರನ್ನು ವಶಕ್ಕೆ ಪಡೆದರು.
ಬಂಧಿಸಲ್ಪಟ್ಟ ನಟ ಹೊರಡಲು ಪ್ರಯತ್ನಿಸಿದಾಗ, ಪೋಲೀಸರು ಠಾಣೆಯ ಬಾಗಿಲನ್ನು ಮುಂಭಾಗದಿಂದ ಲಾಕ್ ಮಾಡಿದರು. ಏತನ್ಮಧ್ಯೆ, ವಿನಾಯಕನ್ ಅವರ ಮ್ಯಾನೇಜರ್ ದೃಶ್ಯಗಳನ್ನು ರೆಕಾರ್ಡ್ ಮಾಡಬೇಡಿ ಎಂದು ಹೇಳಿದ್ದು, ಇದು ವಾಗ್ವಾದಕ್ಕೆ ಕಾರಣವಾಯಿತು. ಕೊನೆಗೆ ಪೋಲೀಸರು ಬಿಟ್ಟು ಕೊಟ್ಟಾಗ, ವಿನಾಯಕನ್ ತಾನು ತೆರಳಲಾರೆ ಎಂದು ಹೇಳಿ ಗಲಾಟೆ ಮಾಡಿದ. ನಾಲ್ಕು ಗಂಟೆಗಳ ಕಾಲ ಪೋಲೀಸ್ ಠಾಣೆಯಲ್ಲಿ ಬಂಧನದಲ್ಲಿದ್ದ ವಿನಾಯಕನ್ ಅವರನ್ನು ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಹೋಟೆಲ್ ಮಾಲೀಕರು ಯಾವುದೇ ದೂರು ನೀಡದಿದ್ದರೂ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಸೃಷ್ಟಿಸಿದ್ದಕ್ಕಾಗಿ ಅಂಚಲಮೂಡು ಪೋಲೀಸರು ವಿನಾಯಕನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.






