ಕಾಸರಗೋಡು: ಕಾಸರಗೋಡು ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗ ಮತ್ತು ಕಾಸರಗೋಡು ಕೇಂದ್ರೀಯ ತೋಟಗಾರಿಕೆ ಸಂಶೋಧನಾ ಕೇಂದ್ರ - ಕೃಷಿ ವಿಜ್ಞಾನ ಕೇಂದ್ರವು ವಿಶ್ವ ಪರಿಸರ ದಿನವನ್ನು ಅದ್ದೂರಿಯಾಗಿ ಆಚರಿಸಿತು. ಕಾಸರಗೋಡು ಸಿ.ಪಿ.ಸಿ.ಆರ್.ಐ.ಆರ್.ಐ. ಸಂಶೋಧನಾ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಪಿ. ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಸಿ.ಪಿ.ಸಿ.ಆರ್.ಐ. ನಿರ್ದೇಶಕ ಡಾ. ಕೆ. ಬಾಲಚಂದ್ರ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ. ಬಿಜು ಮುಖ್ಯ ಭಾಷಣ ಮಾಡಿದರು. ಡಾ. ಆರ್. ಪೊನ್ನುಸ್ವಾಮಿ, ಡಾ. ಟಿ. ಎಸ್. ಮನೋಜ್ ಕುಮಾರ್, ಡಾ. ಬೆಂಜಮಿನ್ ಮ್ಯಾಥ್ಯೂ, ವಲಯ ಅರಣ್ಯ ಅಧಿಕಾರಿಗಳಾದ ಸಿ.ವಿ. ವಿನೋದ್ ಕುಮಾರ್, ಕೆ. ಗಿರೀಶ್, ಉಪವಲಯ ಅರಣ್ಯ ಅಧಿಕಾರಿ (ಗ್ರೇಡ್) ಎನ್.ವಿ. ಸತ್ಯನ್, ವಿಭಾಗ ಅರಣ್ಯ ಅಧಿಕಾರಿಗಳಾದ ಪಿ.ಸಿ. ಯಶೋದಾ, ಕೆ. ಬಾಬು, ಎಂ. ಸುಂದರನ್ ಮತ್ತು ಬೀಟ್ ಅರಣ್ಯ ಅಧಿಕಾರಿ ಎಂ.ಜೆ. ಅಂಜು ಮಾತನಾಡಿದರು.



