ಕಾಸರಗೋಡು: ಜಿಲ್ಲೆಯ ಹಿರಿಯ ನ್ಯಾಯಾಧೀಶರ ಸಮ್ಮುಖದಲ್ಲಿ, ಡಿಎಲ್ಎಸ್ಎ ಅಧ್ಯಕ್ಷರು ಮತ್ತು ಕಾಸರಗೋಡು ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಾನು ಎಸ್ ಪಣಿಕ್ಕರ್ ನ್ಯಾಯಾಲಯದ ಆವರಣದಲ್ಲಿ ಹಣ್ಣಿನ ಗಿಡವನ್ನು ನೆಟ್ಟು ಪರಿಸರ ದಿನಾಚರಣೆಗೆ ಚಾಲನೆ ನಿಡಿದರು. ಅವರು ಸಮಾರಂಭವನ್ನು ಉದ್ಘಾಟಿಸಿ ಪರಿಸರ ದಿನಾಚರಣೆಯ ಸಂದೇಶ ನೀಡಿದರು.
ಕಾಸರಗೋಡು ಟಿಎಲ್ಎಸ್ಸಿ ಅಧ್ಯಕ್ಷೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ರಜಿತಾ ಟಿ.ಎಚ್., ಡಿಎಲ್ಎಸ್ ಕಾರ್ಯದರ್ಶಿ ಹಿರಿಯ ಸಿವಿಲ್ ನ್ಯಾಯಾಧೀಶೆ ರುಗ್ಮಾ ಎಸ್. ರಾಜ್, ಬಾರ್ ಅಸೋಸಿಯೇಷನ್ ಅಧ್ಯಕ್ಷ ಅಡ್ವ. ಮಣಿಕಂಠನ್ ನಂಬಿಯಾರ್, ಸೆಕ್ಷನ್ ಆಫೀಸರ್ ಕೇಶವನ್ ಎ.ಪಿ., ವಕೀಲರು, ನ್ಯಾಯಾಲಯದ ನೌಕರರು, ಪಿ.ಎಲ್.ವಿ. ಮಾರ್ ಮತ್ತು ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು. ಹಣ್ಣಿನ ಸಸಿಗಳನ್ನು ವಿತರಿಸಲಾಯಿತು.



