HEALTH TIPS

ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಭಾರತಾಂಬೆ ಕೇಸರಿ ಧ್ವಜವನ್ನು ಏಕೆ ಹೊತ್ತಿದ್ದಾರೆ: ಸಚಿವೆ ಆರ್ ಬಿಂದು

ತಿರುವನಂತಪುರಂ: ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಭಾರತಾಂಬೆ ಕೇಸರಿ ಧ್ವಜವನ್ನು ಹೊತ್ತಿರುವ ಚಿತ್ರವನ್ನು ಪ್ರಸಾರ ಮಾಡುವುದನ್ನು ಸ್ವೀಕರಿಸಲಾಗದು ಎಂದು ಉನ್ನತ ಶಿಕ್ಷಣ ಸಚಿವೆ ಆರ್ ಬಿಂದು ಹೇಳಿದ್ದಾರೆ. ಕೇರಳ ವಿಶ್ವವಿದ್ಯಾಲಯದೊಳಗೆ ಈ ಚಿತ್ರವನ್ನು ತರಲಾಗಿದೆ ಎಂಬುದು ಆಘಾತಕಾರಿ ಘಟನೆ ಎಂದು ಅವರು ಹೇಳಿದರು. ರಾಜ್ಯಪಾಲರ ನಡೆ ಆಕ್ಷೇಪಾರ್ಹ ಮತ್ತು ಖಂಡನೀಯ ಎಂದಿರುವರು.

ಅವರು ತಮ್ಮ ಬಾಲ್ಯದಲ್ಲಿ ಹೋಗಿದ್ದ ಆರ್‍ಎಸ್‍ಎಸ್ ಶಾಖೆಗಳ ಬಗ್ಗೆ ಒಮ್ಮೆ ನಮಗೆಲ್ಲರಿಗೂ ಹೇಳಿದ್ದರು. ರಾಜ್ಯಪಾಲರ ಸಂಘ ಪರಿವಾರದ ರಾಜಕೀಯವನ್ನು ಜಾರಿಗೆ ತರುವ ಸ್ಥಳ ರಾಜಭವನವಲ್ಲ ಎಂದು ಆರ್ ಬಿಂದು ಹೇಳಿದರು.

ರಾಜ್ಯಪಾಲರು ಪ್ರಚಾರ ಮಾಡುತ್ತಿರುವ ಮತ್ತು ಹೊತ್ತು ತಿರುಗುತ್ತಿರುವ ಚಿತ್ರವು ಅಧಿಕೃತ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಬೇಕಾದ ವಿಷಯವಲ್ಲ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರವೂ ಅವರು ಕೇಸರಿ ಧ್ವಜವನ್ನು ಹೊತ್ತ ಭಾರತಾಂಬೆಯನ್ನು ಪ್ರಚಾರ ಮಾಡುತ್ತಿರುವುದು ತುಂಬಾ ವಿಷಾದಕರ ಎಂದು ಸಚಿವೆ ಆರ್ ಬಿಂದು ಪ್ರತಿಕ್ರಿಯಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries