HEALTH TIPS

ಬ್ರಹ್ಮಪುತ್ರ ಹರಿವನ್ನು ಚೀನಾ ತಡೆದರೆ ಏನಾಗಬಹುದು?:ಪಾಕ್‌ನಿಂದ 'ಬೆದರಿಕೆಯ ಸಂಕಥನ'

ಗುವಾಹಟಿ: ಭಾರತವು ಸಿಂಧೂ ಜಲ ಒಪ್ಪಂದವನ್ನು (ಐಡಬ್ಲ್ಯುಟಿ) ಅಮಾನತಿಲ್ಲಿಟ್ಟ ಬಳಿಕ, 'ಭಾರತಕ್ಕೆ ಬ್ರಹ್ಮಪುತ್ರ ನೀರಿನ ಹರಿವನ್ನು ಚೀನಾ ತಡೆದರೆ ಏನಾಗಬಹುದು' ಎಂಬ ಹೊಸ 'ಬೆದರಿಕೆಯ ಸಂಕಥನ'ವನ್ನು ಪಾಕಿಸ್ತಾನ ಹುಟ್ಟುಹಾಕುತ್ತಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ ಟೀಕಿಸಿದ್ದಾರೆ.

'ಬ್ರಹ್ಮಪುತ್ರ ನೀರಿನ ಹರಿವನ್ನು ತಡೆಯುವ ಕುರಿತಂತೆ ಯಾವುದೇ ಘೋಷಣೆಯನ್ನು ಚೀನಾ ಮಾಡಿಲ್ಲ. ಒಂದು ವೇಳೆ ಇಂತಹ ಕ್ರಮಕ್ಕೆ ಚೀನಾ ಮುಂದಾದಲ್ಲಿ, ಅದು ಅಸ್ಸಾಂನಲ್ಲಿ ಪ್ರತಿ ವರ್ಷ ಸಂಭವಿಸುವ ಪ್ರವಾಹಗಳನ್ನು ದೂರ ಮಾಡಲು ನೆರವಾಗಲಿದೆ' ಎಂದು ಅವರು 'ಎಕ್ಸ್‌'ನಲ್ಲಿ ಹೇಳಿದ್ದಾರೆ.

'ಈಶಾನ್ಯ ಭಾರತದಲ್ಲಿ ಬೀಳುವ ಮಳೆಯೇ ಬ್ರಹ್ಮಪುತ್ರ ನದಿಯಲ್ಲಿ ನೀರಿನ ಹರಿವು ಹೆಚ್ಚಳಕ್ಕೆ ಪ್ರಮುಖ ಕಾರಣ. ಬ್ರಹ್ಮಪುತ್ರದಲ್ಲಿ ಉಂಟಾಗುವ ಪ್ರವಾಹಕ್ಕೆ ಹಿಮಬಂಡೆಗಳ ಕರಗುವಿಕೆ ಹಾಗೂ ಟಿಬೆಟ್‌ನಲ್ಲಿ ಸುರಿಯುವ ಮಳೆಯ ಕೊಡುಗೆ ಶೇ 30-35 ಮಾತ್ರ' ಎಂದಿದ್ದಾರೆ.

'ಹಳೆಯದಾದ ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತಿನಲ್ಲಿಡುವ ನಿರ್ಧಾರ ತೆಗೆದುಕೊಂಡ ನಂತರ ಪಾಕಿಸ್ತಾನ ಇಂತಹ ಬೆದರಿಕೆಯ ಸಂಕಥನವನ್ನು ಸೃಷ್ಟಿಸುತ್ತಿದೆ. ಇಂತಹ ಸಂಕಥನಗಳಿಗೆ ನಾವು ಹೆದರಬೇಕಿಲ್ಲ. ಆದರೆ, ವಾಸ್ತವ ಸಂಗತಿಗಳು ಹಾಗೂ ಸ್ಪಷ್ಟತೆಯೊಂದಿಗೆ ಇಂತಹ ಮಿಥ್ಯೆಗಳನ್ನು ಬಯಲು ಮಾಡೋಣ' ಎಂದೂ ಶರ್ಮಾ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries