HEALTH TIPS

ಕಾಸರಗೋಡಿನಲ್ಲಿ ಮತ್ತೆ ಚುರುಕುಪಡೆದುಕೊಂಡ ಮುಂಗಾರು-ಇಂದಿನಿಂದ ಆರೆಂಜ್ ಅಲರ್ಟ್

ಕಾಸರಗೋಡು: ಕಳೆದ ಒಂದು ವಾರದ ದುರ್ಬಲಗೊಂಡಿದ್ದ  ಮುಂಗಾರು ಬುಧವಾರದಿಂದ ಮತ್ತೆ ಚುರುಕುಪಡೆದುಕೊಂಡಿದೆ. ಕಾಸರಗೋಡು ಜಿಲ್ಲೆ ಒಳಗೊಂಡ ಮಲಬಾರ್ ಸೇರಿದಂತೆ ಕೇರಳಾದ್ಯಂತ ಬಿರುಸಿನ ಮಳೆಯಾಗುತ್ತಿದೆ.  ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ  ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ.

ಕೇರಳದಲ್ಲಿ ಮುಂದಿನ ಏಳು ದಿ£ವಸಗಳ ಕಾಲ ಬಿರುಸಿನ ಮಳೆಯಾಗಲಿದ್ದು, 14ರಂದು ಕೇರಳ ತೀರದಲ್ಲಿ ಗಂಟೆಗೆ 50-60ಕೀ ಮೀ ವೇಗದಲ್ಲಿ ಕೂಡಿದ ಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ. ಜೂನ್ 12ರಿಂದ 15ರ ವರೆಗೆ ಕಾಸರಗೋಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಕಾಲಾವಧಿಯಲ್ಲಿ ರೆಡ್ ಅಲರ್ಟ್‍ಗೆ ಸಮಾನವಾದ ಮಳೆಯಾಗುವ ಸಾಧ್ಯತೆಯಿರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries