HEALTH TIPS

ತೊಟ್ಟೆತ್ತೋಡಿ: ಸಂಭ್ರಮದ ಪ್ರವೇಶೋತ್ಸವ

ಮಂಜೇಶ್ವರ:  ತೊಟ್ಟೆತ್ತೋಡಿ ವಾಣೀ ವಿಲಾಸ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರವೇಶೋತ್ಸವ ಸೋಮವಾರ ಜರಗಿತು. ನವಾಗತ ಮಕ್ಕಳನ್ನು ಸ್ವಾಗತಿಸಲಾಯಿತು. ಶಾಲಾ ಪ್ರಬಂಧಕ ಡಾ.ಜಯಪ್ರಕಾಶ್ ನಾರಾಯಣ ಟಿ.ಕೆ ಅಧ್ಯಕ್ಷತೆ ವಹಿಸಿದ್ದರು. 

ಗ್ರಾ.ಪಂ. ಸದಸ್ಯ ಕುಸುಮಾ  ಮೋಹನ್ ಪ್ರವೇಶೋತ್ಸವ ಉದ್ಘಾಟಿಸಿದರು. ಶಾಲಾ ಮಕ್ಕಳಿಗೆ ಎಸ್.ಎಫ್.ಐ ವಿದ್ಯಾರ್ಥಿಗಳು ಕಲಿಕೋಪಕರಣ ನೀಡಿದರು. ಶಾಲಾ ಹಿತೈಷಿಗಳಾದ ದೇವದಾಸ ಶೇನವ ಒಂದನೇ ತರಗತಿ ವಿದ್ಯಾರ್ಥಿಗಳಿಗೆ ಬ್ಯಾಗು ನೀಡಿದರು. ಬಾಲಕೃಷ್ಣ ಶೆಟ್ಟಿ ಮಂಗಳೂರು ಇವರು ಮಕ್ಕಳಿಗೆ  ನೋಟ್ ಪುಸ್ತಕಗಳನ್ನು ನೀಡಿದರು. ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಮುಖ್ಯೋಪಾಧ್ಯಾಯಿನಿ ರಾಜೇಶ್ವರಿ ಎಸ್.ರಾವ್ ಸ್ವಾಗತಿಸಿ, ದೀಕ್ಷಾ ಕೆ ಟೀಚರ್ ವಂದಿಸಿದರು. ಜಯಲಕ್ಷ್ಮಿ ಟೀಚರ್ ಕಾರ್ಯಕ್ರಮ ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries