HEALTH TIPS

ಏರ್‌ಇಂಡಿಯಾ ದುರಂತ: ಕೇಂದ್ರ ಸರ್ಕಾರದಿಂದ ಮೊದಲ ಸುದ್ದಿಗೋಷ್ಟಿ; ಕಾರಣದ ಬಗ್ಗೆ ಮಾತನಾಡಿದ ಸಚಿವ

ನವದೆಹಲಿ: ಜೂನ್‌ 12ರಂದು ಅಹ್ಮದಾಬಾದ್‌ನಲ್ಲಿ ಸಂಭವಿಸಿದ ಅಹ್ಮದಾಬಾದ್‌ - ಲಂಡನ್‌ 171 ಏರ್‌ಇಂಡಿಯಾ ವಿಮಾನದ ಭೀಕರ ಅಪಘಾತದ ಕುರಿತು ಕೇಂದ್ರ ಸರ್ಕಾರ ಮೊದಲ ಸುದ್ದಿಗೋಷ್ಟಿಯನ್ನು ನಡೆಸಿದೆ.

ನಾಗರಿಕ ವಿಮಾನಯಾನ ಸಚಿವ ರಾಮ್‌ ಮೋಹನಾ ನಾಯ್ಡು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದು, ಅವಘಡದಲ್ಲಿ ಒಟ್ಟು 270 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.

ಘಟನೆ ಕುರಿತು ಮಾತನಾಡಿದ ಅವರು ಸುದ್ದಿ ತಿಳಿಯುತ್ತಿದ್ದಂತೆ ಆಗಲೇ ಗುಜರಾತ್‌ ರಾಜ್ಯ ಸರ್ಕಾರ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯ ಆರಂಭಿಸಿತ್ತು. ಬಳಿಕ ಕೇಂದ್ರ ಸರ್ಕಾರವೂ ಸಹ ಕೈಜೋಡಿಸಿ ಕೆಲಸ ನಿರ್ವಹಿಸಿತು ಎಂದರು.

ಅಲ್ಲದೇ ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಪತ್ತೆಯಾಗಿದ್ದು, ಇದರ ಮೂಲಕ ಘಟನೆಗೆ ಕಾರಣವೇನೆಂಬುದು ತಿಳಿದುಬರಲಿದೆ ಎಂದರು. ಈಗಾಗಲೇ ತಂಡವು ಬ್ಲ್ಯಾಕ್‌ ಬಾಕ್ಸ್‌ ಅನ್ನು ಡಿಕೋಡಿಂಗ್‌ಗೆ ಕಳುಹಿಸಲಾಗಿದ್ದು, ಏರ್‌ಕ್ರಾಫ್ಟ್‌ ಆಕ್ಸಿಡೆಂಟ್‌ ಇನ್ವೆಸ್ಟಿಗೇಷನ್‌ ಬ್ಯುರೋ ಈ ಬಗ್ಗೆ ತನಿಖೆ ನಡೆಸಲಿದೆ.

ಇನ್ನು ತನಿಖಾ ತಂಡಕ್ಕೆ 90 ದಿನಗಳ ಗಡುವನ್ನು ನೀಡಲಾಗಿದೆ ಎಂದು ಸಹ ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries