HEALTH TIPS

ಎರ್ನಾಕುಳಂನಲ್ಲಿ ಪಾದ್ರಿಗಳ ಕಾರ್ಯಕ್ರಮದಲ್ಲಿ ಪಾಕಿಸ್ತಾನ ಧ್ವಜ; ಪ್ರಕರಣ ದಾಖಲಿಸಿದ ಪೋಲೀಸರು

ಎರ್ನಾಕುಳಂ: ಉದಯಂಪೀರೂರಿನಲ್ಲಿ ಪಾದ್ರಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಕಿಸ್ಥಾನ ಧ್ವಜ ಬಳಸಿರುವುದು ಕಂಡುಬಂದಿದೆ. ಈ ಬಗ್ಗೆ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಜೀಸಸ್ ಜನರೇಷನ್ ಎಂಬ ಪ್ರಾರ್ಥನಾ ಗುಂಪಿನ ನೇತೃತ್ವ ವಹಿಸಿರುವ ದೀಪು ಜಾಕೋಬ್ ವಿರುದ್ಧ ಪ್ರಕರಣ ದಾಖಲಾಗಿದೆ.

ಬಿಜೆಪಿ ಎರ್ನಾಕುಳಂ ಜಿಲ್ಲಾಧ್ಯಕ್ಷ ಶ್ರೀಕುಟ್ಟನ್ ಅವರ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಬಿ.ಎನ್.ಎಸ್ 196 (1) ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಉದಯಂಪೆರೂರಿನಲ್ಲಿ ನಡೆದ ಕಾರ್ಯಕ್ರಮವನ್ನು ಸುಮಾರು ನಲವತ್ತು ಪಾದ್ರಿಗಳು ಪಾಲ್ಗೊಂಡಿದ್ದರು.  ಜೀಸಸ್ ಜನರೇಷನ್ ಆಡಿಟೋರಿಯಂನಲ್ಲಿ 40 ದಿನಗಳಿಂದ ನಡೆಯುತ್ತಿದ್ದ ಪ್ರಾರ್ಥನಾ ಸೇವೆಯಲ್ಲಿ ಪಾಕಿಸ್ತಾನಿ ಧ್ವಜವನ್ನು ಬಳಸಲಾಗಿದೆ. ಕೊಲೆಗೆ ಕರೆ ನೀಡುವುದು ಮತ್ತು ಧಾರ್ಮಿಕ ಪೈಪೆÇೀಟಿಯನ್ನು ಉತ್ತೇಜಿಸುವ ವಿಭಾಗಗಳ ಅಡಿಯಲ್ಲಿ ದೀಪು ವಿರುದ್ಧ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.

ತೊಂದರೆ ಸೃಷ್ಟಿಸಲು ದೀಪು ಜಾಕೋಬ್ ಹಾಗೆ ಮಾಡಿಲ್ಲ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ 20 ದೇಶಗಳ ಧ್ವಜಗಳನ್ನು ಹಾರಿಸಲಾಗಿತ್ತು. ಶ್ರೀಕುಟ್ಟನ್ ಭಾರತೀಯ ಧ್ವಜಕ್ಕೆ ಅಗೌರವ ತೋರಿದ್ದಾರೆ ಎಂದು ಆರೋಪಿಸಲಾಗಿದೆ. ಕಾರ್ಯಕ್ರಮದ ನಂತರ ಭಾರತದ ಧ್ವಜವನ್ನು ಎಸೆಯಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ. ದೀಪು ತಲೆಮರೆಸಿಕೊಂಡಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries