HEALTH TIPS

ಶೇಣಿಯ ಡಿವೈಎಫ್.ಐ. ನೇತಾರ ಸಹಿತ ಎಣ್ಮಕಜೆ ಪಂಚಾಯತಿನ ಸಿಪಿಐಎಂ ಬ್ರಾಂಚ್ ಕಾರ್ಯದರ್ಶಿ ಕಾಂಗ್ರೆಸ್ ಗೆ ಸೇರ್ಪಡೆ

ಪೆರ್ಲ : ಸಿಪಿಐಎಂನ ಅರಾಜಕೀಯ ಹಾಗೂ ಜನ ಸಾಮಾನ್ಯರೆಡೆಗೆ ತೋರ್ಪಡಿಸುವ ಜಾತ್ಯಾತೀಯ ವಿರುದ್ಧ ಧೋರಣೆಯನ್ನು ತಿರಸ್ಕರಿಸಿ ಎಣ್ಮಕಜೆ ಪಂಚಾಯತಿ ಶೇಣಿ  ಬ್ರಾಂಚ್ ಕಾರ್ಯದರ್ಶಿ ನಜಿಬುಲ್ಲಾ ಶೇಣಿ ಹಾಗೂ ಡಿವೈಎಫ್ ಐ ನೇತಾರ ಸಿದ್ಧಿಕ್ ಪೆರ್ದನೆ  ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. 

ಈ ಹಿಂದೆ ಡಿವೈಎಫ್.ಐ ಕಾರ್ಯದರ್ಶಿ, ಬಳಿಕ ಸಿಪಿಐಎಂನ ಬ್ರಾಂಚ್ ಕಾರ್ಯದರ್ಶಿಯಾಗಿ ದುಡಿದಿದ್ದ ನಜಿಬುಲ್ಲಾ ಕಳೆದ ಪಂಚಾಯತಿ ಚುನಾವಣೆಯಲ್ಲಿ ಸಿಪಿಐಎಂನ್ನು ಪ್ರತಿನಿಧಿಕರಿಸಿದ ಸ್ಪರ್ಧಾರ್ಥಿಯಾಗಿ ಕಣದಲ್ಲಿದ್ದರು. ಬಾಲ್ಯ ಕಾಲದಿಂದಲೇ  ಎಸ್ ಎಫ್ ಐ ,ಡಿವೈಎಫ್.ಐ. ವಲಯ ಕಾರ್ಯದರ್ಶಿಯಾಗಿ  ಗುರುತಿಸಿಕೊಂಡಿದ್ದ ಸಿದ್ಧೀಕ್ ಎಡರಂಗವನ್ನು ತೊರೆದು ಐಕ್ಯರಂಗಕ್ಕೆ ಸೇರ್ಪಡೆಗೊಳ್ಳುತ್ತಿರುವ ವೇಳೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಉಜ್ವಲ ಸ್ವಾಗತ ನೀಡಲಾಯಿತು. 

ಗುರುವಾರ ಪೂರ್ವಾಹ್ನ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೋನಿ ಸೆಬಾಸ್ಟಿಯನ್ ಹಾಗೂ  ಡಿಸಿಸಿ ಅಧ್ಯಕ್ಷ ಪಿ.ಕೆ.ಫೈಸಲ್ ಶಾಲು ಹೊದಿಸಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನೇತಾರರಾದ ಆಶ್ರಫ್ ಆಲಿ, ರಮೇಶನ್ ಕರುವಚ್ಚೇರಿ, ಸೋಮಶೇಖರ್ ಜೆ.ಎಸ್,ಗೋವಿಂದ ನಾಯರ್ ಕುಂಞಂಬು ನಂಬ್ಯಾರ್, ಮಂಜೇಶ್ವರ ಮಂಡಲ ಕಾಂಗ್ರೆಸ್ ನ  ಲಕ್ಷಣ ಪ್ರಭು ಕುಂಬಳೆ,  ಪೃಥ್ವಿರಾಜ್ ಶೆಟ್ಟಿ, ಫಾರುಕ್ ಶಿರಿಯಾ, ಎಣ್ಮಕಜೆ ಮಂಡಲ ಕಾಂಗ್ರೆಸ್ ಪದಾಧಿಕಾರಿಗಳಾದ ರಾಧಾಕೃಷ್ಣ ನಾಯಕ್ ಜೆ.ಎಸ್.ಶೇಣಿ, ಮಂಡಲ ಉಪಾಧ್ಯಾಕ್ಷ  ರಸಾಕ್ ಪೆರ್ಲ, ಯೂತ್ ಕಾಂಗ್ರೆಸ್ ನ ಫಾರೂಕ್ ಪಳ್ಳಂ, ಮುಂತಾರಲಿ ಕುದ್ರೆಡ್ಕ, ನೌಷಾದ್ ಶೇಣಿ,ಉಮ್ಮರ್ ಕಂಗಿನಮೂಲೆ ಮೊದಲಾದವರು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries