HEALTH TIPS

ಬ್ಯಾಂಕಾಕ್‌ | ಬೌದ್ಧ ವಿಹಾರದ ಮೇಲೆ ವಾಯು ದಾಳಿ: 23 ಮಂದಿ ಬಲಿ

ಬ್ಯಾಂಕಾಕ್‌: ಮ್ಯಾನ್ಮಾರ್‌ನ ಮಧ್ಯ ಭಾಗದ ಸಾಗ್ಯಾಂಗ್‌ ಪ್ರಾಂತ್ಯದ ಬೌದ್ಧ ವಿಹಾರದ ಮೇಲೆ ನಡೆದ ವಾಯುದಾಳಿಯಲ್ಲಿ 23 ಮಂದಿ ಮೃತಪಟ್ಟಿದ್ದಾರೆ.

'ಲಿನ್‌ ತ-ಲು ಗ್ರಾಮದಲ್ಲಿರುವ ವಿಹಾರದ ಮೇಲೆ ರಾತ್ರಿ ವೇಳೆ ನಡೆದ ದಾಳಿಯಲ್ಲಿ 30 ಮಂದಿ ಗಾಯಗೊಂಡಿದ್ದು, ಈ ಪೈಕಿ 10 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ' ಎಂದು ಬಂಡುಕೋರರ ಗುಂಪಿನ ಸದಸ್ಯರು ತಿಳಿಸಿದ್ದಾರೆ.

'ಇತ್ತೀಚಿನ ದಿನಗಳಲ್ಲಿ ನಡೆದ ಸಂಘರ್ಷದಿಂದಾಗಿ 150ಕ್ಕೂ ಅಧಿಕ ಗ್ರಾಮಸ್ಥರು ವಿಹಾರದಲ್ಲಿ ನೆಲೆ ಪಡೆದಿದ್ದರು. ರಾತ್ರಿ 1 ಗಂಟೆ ವೇಳೆ ಯುದ್ಧ ವಿಮಾನದ ಮೂಲಕ ಬಾಂಬ್‌ ದಾಳಿ ನಡೆದಿದ್ದು, ನಾಲ್ವರು ಮಕ್ಕಳು ಸೇರಿದಂತೆ 23 ಮಂದಿ ಮೃತಪಟ್ಟಿದ್ದಾರೆ' ಎಂದು ತಿಳಿಸಿದ್ದಾರೆ.

2021ರಲ್ಲಿ ಮ್ಯಾನ್ಮಾರ್‌ನಲ್ಲಿ ಅಂಗ್‌ ಸಾನ್‌ ಸೂಕಿ ನೇತೃತ್ವದ ಚುನಾಯಿತ ಸರ್ಕಾರದಿಂದ ಅಧಿಕಾರ ಕಿತ್ತುಕೊಂಡು, ಸೇನೆಯು ಆಡಳಿತ ನಡೆಸುತ್ತಿದೆ. ಇಡೀ ದೇಶದಲ್ಲಿ ದಂಗೆ ಆರಂಭವಾಗಿದ್ದು, ಪ್ರತಿರೋಧ ವ್ಯಕ್ತಪಡಿಸುವವರ ವಿರುದ್ಧ ಸೇನೆಯು ಹಿಂಸಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ದಾಳಿ ಕುರಿತು ಸೇನೆಯು ಪ್ರತಿಕ್ರಿಯಿಸಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries