HEALTH TIPS

ಆಕಾಶವಾಣಿ ಭಾವಗಾನದಲ್ಲಿ ವಿರಾಜ್ ಅಡೂರು ಕವನ ಪ್ರಸಾರ

ಮಂಗಳೂರು : ಕಾಸರಗೋಡು ಜಿಲ್ಲೆಯ ಕವಿ, ಪತ್ರಕರ್ತ ವಿರಾಜ್ ಅಡೂರು ಅವರು ಬರೆದ 'ನನಸಧಾಮ'  ಕವನವು ಮಂಗಳೂರು ಆಕಾಶವಾಣಿಯ ಭಾವಗಾನ ಕಾರ್ಯಕ್ರಮದಲ್ಲಿ ಪ್ರಸಾರವಾಗಲಿದೆ. 

ಮಾನವ ಜೀವನದ ಅನೇಕ ಕನಸುಗಳಿಗೆ ಜೀವ ತುಂಬುವ ಲೌಕಿಕ, ಸಾಮಾಜಿಕ, ಸಾಂಸ್ಕøತಿಕ ಹಾಗೂ ಧಾರ್ಮಿಕ ಚಟುವಟಿಕೆಗಳನ್ನು ಈ ಕವನದಲ್ಲಿ ವಿಶ್ಲೇಷಿಸಲಾಗಿದೆ. ಸಂಕುಚಿತ ತತ್ವಗಳಿಂದ ವಿಶಾಲತ್ವದೆಡೆಗೆ ತೆರೆದುಕೊಳ್ಳುವ ಮೂಲಕ ಭಾವಜೀವಿಯಾದ ಮಾನವನು ತನ್ನ ಕನಸುಗಳಿಗೆ ರೆಕ್ಕೆ ಕಟ್ಟಿ ಹಾರುವ ಸಂಕಲ್ಪ ಮಾಡುತ್ತಾನೆ. ಗಗನ ವ್ಯಾಪ್ತಿಯಲ್ಲಿ ಅರಳಿಕೊಂಡು, ನನಸುಗಳನ್ನು ಬಾಚಿಕೊಳ್ಳುವ,  ನಿಬರ್ಂಧಿತ ಕಟ್ಟುಪಾಡುಗಳನ್ನು ವಿರೋಧಿಸುವ ವರ್ತನೆಯು ಕವನದಲ್ಲಿ ಇದೆ. ಈ ರಚನೆಯು ಏಹಿಕ ಜಂಜಾಟಗಳಿಂದ ಮೀರಿದ  ನನಸಧಾಮ ಎಂಬ ನೆಮ್ಮದಿಯ ತಾಣದತ್ತ ಸಾಗುವ ಮಾರ್ಗಸೂಚಿಯಂತೆ ಇದೆ. ಈ ಕವನವು  ಆಕಾಶವಾಣಿಯ ಭಾವಗಾನ ತಿಂಗಳ ಹಾಡು ವಿಭಾಗದಲ್ಲಿ ಇದೇ ಜುಲೈ 4ರಿಂದ ಈ ತಿಂಗಳ ಪ್ರತೀ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಖ್ಯಾತ ಕಲಾವಿದರ ಸಂಗೀತ ಸಂಯೋಜನೆಯಲ್ಲಿ ಪ್ರಸಾರವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries