ಮಧೂರು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಯಕ್ಷಗಾನ ಪ್ರಸಂಗ ರಚನೆ ಕಮ್ಮಟ ಜರಗಿತು. ಹಿರಿಯ ಯಕ್ಷಕವಿ ಕೀರ್ತಿ ಶೇಷ ಶಿರೂರು ಪಣಿಯಪ್ಪಯ್ಯ ಅವರ 108ನೇ ಜನ್ಮದಿನದ ಪ್ರಯುಕ್ತ ಪೂರ್ಣ ಕಾರ್ಯಕ್ರಮವನ್ನು ಅವರಿಗೆ ಸಮರ್ಪಿಸಲಾಯಿತು. ಸಮಾರಂಭವನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಉದ್ಘಾಟಿಸಿ ಆಶೀರ್ವದಿಸಿದರು. ಅಧ್ಯಯನ ಯೋಗ್ಯ ಕಾರ್ಯಕ್ರಮಗಳ ಜೊತೆ ಪ್ರಸಂಗ ರಚನೆ ಕಮ್ಮಟವು ಅಪೂರ್ವವೆನಿಸಿದೆ. ಯಶಸ್ವಿಯಾಗಲಿ ಎಂದರು.
ಗಡಿನಾಡು ಕಾಸರಗೋಡಿನ ಹಿರಿಯ ಯಕ್ಷಗಾನ ಕವಿ ಶೇಡಿಗುಮ್ಮೆ ವಾಸುದೇವ ಭಟ್ ಇವರಿಗೆ ಫಣಿಗಿರಿ ಪ್ರತಿಷ್ಠಾನ ಶಿರೂರು ಬೈಂದೂರು ಇವರು ನೀಡುವ ಫಣಿಗಿರಿ ಪ್ರಶಸ್ತಿ- 2025 ಪ್ರದಾನಗೈದು ಗೌರವಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಉಮೇಶ ಶಿರೂರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಳೆಯ ಯಕ್ಷಗಾನ ಧ್ವನಿಸುರುಳಿಗಳ ಸಂರಕ್ಷಕ ಎಂ.ಎಲ್.ಭಟ್ ಮರವಂತೆ ಇವರನ್ನು ಸಿರಿಬಾಗಿಲು ಪ್ರತಿಷ್ಠಾನ ವತಿಯಿಂದ ವಿಶೇಷವಾಗಿ ಗೌರವಿಸಲಾಯಿತು. ಕಾಸರಗೋಡಿನ ಸಂಶೋಧಕರಾದ ಡಾ. ಶಂಕರನಾರಾಯಣ ಭಟ್ ಉಪ್ಪಂಗಳ ಇವರು ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಪ್ರಥಮವಾಗಿ ಒಂದು ಲಕ್ಷ ರೂಪಾಯಿ ಯನ್ನು ದತ್ತಿನಿಧಿಗಾಗಿ ಪೂಜ್ಯ ಎರಡನೀರು ಮಠಾಧೀಶರ ಆಶೀರ್ವಾದ ಮೂಲಕ ನೀಡಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ಸತೀಶ ಅಡಪ್ಪ ಸಂಕಬೈಲು, ಕಮ್ಮಟದ ಮಾರ್ಗದರ್ಶಕರಾದ ಶ್ರೀಧರ ಡಿ.ಎಸ್.ಕಿನ್ನಿಗೋಳಿ, ಡಾ. ವಸಂತ ಭಾರದ್ವಾಜ್ ಕಬ್ಬಿನಾಲೆ, ರಾಜಗೋಪಾಲ್ ಕನ್ಯಾನ ಉಪಸ್ಥಿತರಿದ್ದರು. ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಸ್ವಾಗತಿಸಿ,ಪ್ರಸನ್ನ ಕೃಷ್ಣ ಕಾರಂತ ದೇಶಮಂಗಲ ವಂದಿಸಿದರು. ಜಗದೀಶ್ ಕೂಡ್ಲು ನಿರೂಪಿಸಿದರು. ರಾಜ ಮಯ್ಯ ಸನ್ಮಾನ ಪತ್ರ ವಾಚಿಸಿದರು.
ಆ ಬಳಿಕ ಪ್ರಸಂಗಕರ್ತರಿಗೆ ಛಂದಸ್ಸಿನ ಮೂಲ ತತ್ವಗಳು, ಪಾರಿಭಾಷಿಕ ಪದಗಳು, ಅಕ್ಷರ ವೃತ್ತ, ಅಂಶ ಬಂಧಗಳು ಈ ಕುರಿತಾದ ಮಾರ್ಗದರ್ಶನವನ್ನು ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ನಡೆಸಿಕೊಟ್ಟರು. ಮಾತ್ರ ಬಂಧಗಳು, ಷಟ್ಪದಿಗಳು, ಕಂದ ಪದ್ಯ, ಚಂದೋ ಮಿಶ್ರಣ, ವಿಶಿಷ್ಟ ಪದ್ಯ ಬಂಧಗಳ ಕುರಿತಾಗಿ ಹಿರಿಯರಾದ ಶ್ರೀಧರ ಡಿ.ಎಸ್.ಮಾರ್ಗದರ್ಶನವಿತ್ತರು. ಭಾಗವಹಿಸಿದ್ದ 25ಕ್ಕೂ ಹೆಚ್ಚು ಪ್ರಸಂಗಕರ್ತರಿಂದ ಮುಕ್ತ ಸಂವಾದ ನಡೆಯಿತು.




.jpg)
.jpg)
