HEALTH TIPS

ಶ್ರೀ ಕ್ಷೇತ್ರ ಕಾಳ್ಯಂಗಾಡಿನಲ್ಲಿ ಗರ್ಭಗೃಹ ದಾರಂದ ಮುಹೂರ್ತ

ಕಾಸರಗೋಡು : ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ಶಿಲಾಮಯ ಗರ್ಭಗುಡಿ ನಿರ್ಮಾಣದ ಸಿದ್ಧತೆ ಭರದಿಂದ ಸಾಗುತ್ತಿದ್ದು,  ಗರ್ಭಗೃಹದ ದಾರಂದ ಮುಹೂರ್ತ ನಡೆಯಿತು. ಶಿಲ್ಪಿ ಬೆದ್ರಡ್ಕ ರಮೇಶ ಕಾರಂತ ಅವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. 

ಸಾಂಪ್ರದಾಯಿಕ ಚಟುವಟಿಕೆಗಳ ನಂತರ ಶಿಲಾಮಯ ಗರ್ಭಗುಡಿಯ ನಿರ್ಮಾಣ ಹೊಣೆ ಹೊತ್ತಿರುವ ಮುರುಡೇಶ್ವರದ ಅಣ್ಣಪ್ಪ ಜಿ ಅವರು ಕಾರ್ಮಿಕತ್ವ ವಹಿಸಿದರು. ಜೀರ್ಣೋದ್ಧಾರ ಸಮಿತಿಯ ರಕ್ಷಾಧಿಕಾರಿಗಳಾದ ಡಾಟ ಅನಂತ ಕಾಮತ್ ಉಪಸ್ಥಿತಿಯಲ್ಲಿ ಗೌರವಾಧ್ಯಕ್ಷರಾದ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಅವರು ಮುಂದಾಳುತ್ವ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಹರೀಶ್ ಕೊಳ್ಕೆಬೈಲು, ಕೋಶಾಧಿಕಾರಿ ಶಾಂತಕುಮಾರ್ ಮುಂಡಿತ್ತಡ್ಕ, ಆಡಳಿತೆ ಮೊಕ್ತೇಸರ ಅಚ್ಯುತ ಕೆ., ಧರ್ಮದರ್ಶಿ ನಾರಾಯಣ ಪೂಜಾರಿ, ರಘು ಮೀಪುಗುರಿ, ಲವ ಮೀಪುಗುರಿ, ಬಾಬು ಪೂಜಾರಿ, ರಂಜಿತ್ ಮನ್ನಿಪ್ಪಾಡಿ, ದುಗ್ಗಪ್ಪ ಕಾಳ್ಯಂಗಾಡು, ಆನಂದ ಮೀಪುಗುರಿ, ದಯಾನಂದ ಕಾಳ್ಯಂಗಾಡು, ಗೋವಿಂದ, ಪ್ರಶಾಂತ,ಅಜೇಯ, ಶಂಕರ, ಗಣೇಶ,ರಾಜೇಶ್, ಸಚಿನ್, ರಮೇಶ್ ಮಾತೃಸಮಿತಿ ಪದಾಧಿಕಾರಿಗಳು ಹಾಗೂ ಪ್ರಮುಖರಾದ ದೀಪಾ ಕೆ, ಶೋಭಾ, ಹರ್ಷಿತ, ಅಕ್ಷತ, ಚಂದ್ರಾವತಿ, ಭವಾನಿ, ರಮಣಿ, ಶಶಿಕಲ, ಮಮತಾ ಮೊದಲಾದವರು ಉಪಸ್ಥಿತರಿದ್ದರು. 

ಶೀಘ್ರದಲ್ಲೇ ಪೂರ್ಣಶಿಲಾಮಯ ಗರ್ಭಗುಡಿಯ ನಿರ್ಮಾಣ ನಿರೀಕ್ಷೆಯಿದ್ದು, ಒಂದು ಕೋಟಿ ರೂ.ಗೂ ಅಧಿಕ ವೆಚ್ಚ ಅಂದಾಜಿಸಲಾಗಿದೆ. ಈಗ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಭಗವದ್ಭಕ್ತರ ಸಂಪೂರ್ಣ ಸಹಕಾರ ಕೋರಲಾಗಿದೆ ಎಂದು ಪದಾಧಿಕಾರಿಗಳು ವಿನಂತಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries