HEALTH TIPS

ಒಡಿಶಾ | ಸ್ಮಶಾನಗಳಿಂದ ನಾಪತ್ತೆಯಾಗುತ್ತಿರುವ ಶವಗಳು; ತನಿಖೆ ಆರಂಭ

ಭ್ರದ್ರಕ್: ಒಡಿಶಾದ ಭದ್ರಕ್ ಜಿಲ್ಲೆಯಲ್ಲಿನ ಸ್ಮಶಾನಗಳಲ್ಲಿ ಹೂಳಿರುವ ಶವಗಳು ನಾಪತ್ತೆಯಾಗುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಒಡಿಶಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಳೆದ ಕೆಲ ತಿಂಗಳುಗಳಲ್ಲಿ ಮಣಿನಾಥಪುರ ಸ್ಮಶಾನದಿಂದ ನಾಲ್ಕು ಶವಗಳನ್ನು ಹೊರಕ್ಕೆ ತೆಗೆದು ಸಾಗಿಸಲಾಗಿದೆ.

ಹೀಗೆ ಪ್ರತಿ ತಿಂಗಳು ಶವಗಳು ನಾಪತ್ತೆಯಾಗುತ್ತಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

2017ರಿಂದ ಶವಗಳ ನಾಪತ್ತೆ ಪ್ರಕರಣ ನಡೆಯುತ್ತಲೇ ಇದೆ. ನಮ್ಮ ತಾಯಿಯ ಮೃತದೇಹ ಹೂತ ಹತ್ತು ದಿನಗಳಲ್ಲೇ ನಾಪತ್ತೆಯಾಗಿತ್ತು. ಈ ಕುರಿತು ದೂರು ನೀಡಿದ್ದೇನೆ' ಎಂದು ಸ್ಥಳೀಯ ತಪಸ್‌ ಸಮಾಲ್‌ ಎಂಬುವವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಇನ್‌ಸ್ಟೆಕ್ಟರ್ ಕಮಲಕಂಠ ನಾಯಕ್‌, 'ಘಟನೆ ಕುರಿತು ಹಲವು ದೂರುಗಳು ದಾಖಲಾಗಿವೆ. ಈ ಕುರಿತು ತನಿಖೆ ಕೈಗೊಳ್ಳಲಾಗಿದೆ' ಎಂದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries