ತ್ರಿಶೂರ್: ಅವಳಿ ಪೋಲೀಸರ ನಡುವಿನ ಜಗಳದ ನಂತರ, ಇಬ್ಬರನ್ನೂ ಅಮಾನತುಗೊಳಿಸಲಾಗಿದೆ. ವಿಶೇಷ ಶಾಖೆಯ ಎಸ್.ಐ ದಿಲೀಪ್ ಕುಮಾರ್ ಮತ್ತು ಪಝಯನ್ನೂರ್ ಠಾಣೆಯ ಎಸ್.ಐ ಪ್ರದೀಪ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ನಗರ ಪೆÇಲೀಸ್ ಆಯುಕ್ತ ಇಳಂಗೊ ಅವರ ನೇರ ತನಿಖೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಕೌಟುಂಬಿಕ ಸಮಸ್ಯೆಗಳಿಗೆ ಸಂಬಂಧಿಸಿದ ಜಗಳದಲ್ಲಿ ಪ್ರದೀಪ್ ಕುಮಾರ್ ಅವರ ಕೈ ಮುರಿದಿತ್ತು.
ಭಾನುವಾರ ಬೆಳಿಗ್ಗೆ ನಡೆದ ಘಟನೆಯ ನಂತರ, ಚೇಳಕ್ಕರ ಪೋಲೀಸರು ಘಟನೆಯಲ್ಲಿ ಪ್ರಕರಣ ದಾಖಲಿಸಿದ್ದರು. ಗಾಯಗೊಂಡ ಪ್ರದೀಪ್ ಕುಮಾರ್ ಚೇಳಕ್ಕರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಈ ಘಟನೆ ಚೇಳಕ್ಕರದಲ್ಲಿರುವ ಅವರ ಮನೆಯ ಮುಂದೆ ನಡೆದಿದೆ. ಚೇಳಕ್ಕರದಲ್ಲಿ ವಿಶೇಷ ಶಾಖೆಯ ಅಧಿಕಾರಿ ದಿಲೀಪ್ ಕುಮಾರ್ ಅವರನ್ನು ಇತ್ತೀಚೆಗೆ ವಡಕ್ಕಂಚೇರಿಗೆ ವರ್ಗಾಯಿಸಲಾಗಿತ್ತು.





