HEALTH TIPS

ಅಮರನಾಥ ಯಾತ್ರೆ: ಆಗಸ್ಟ್ 3ರವರೆಗೆ ತಾತ್ಕಾಲಿಕ ಸ್ಥಗಿತ

ಶ್ರೀನಗರ/ಜಮ್ಮು: ಭಾರಿ ಮಳೆ ಕಾರಣದಿಂದ ಅಮರನಾಥ ಯಾತ್ರೆಯನ್ನು ಆಗಸ್ಟ್ 3ರವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಕ್ತರ ಸುರಕ್ಷತೆಗಾಗಿ ಪಹಲ್‌ಗಾಂವ್ ಮತ್ತು ಬಾಲ್‌ಟಾಲ್ ಮಾರ್ಗಗಳಲ್ಲಿ ತುರ್ತು ನಿರ್ವಹಣಾ ಮತ್ತು ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಮೂರು ದಿನ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಶುಕ್ರವಾರ ಬೆಳಗ್ಗೆ ಪಹಲ್‌ಗಾಂವ್ ಮಾರ್ಗದಿಂದ ಯಾತ್ರೆಗೆ ಅನುಮತಿ ನೀಡಲಿಲ್ಲ. ಆದರೆ ಬಾಲ್‌ಟಾಲ್ ಮಾರ್ಗದಿಂದ ಅನುಮತಿ ನೀಡಲಾಗಿತ್ತು. ನಂತರ ಅಲ್ಲಿಯೂ ಭಾರಿ ಮಳೆ ಕಾರಣದಿಂದ ಯಾತ್ರೆಯನ್ನು ಸ್ಥಗಿತಗೊಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಕ್ತರ ಸುರಕ್ಷತೆ ದೃಷ್ಟಿಯಿಂದ ಎರಡು ಮಾರ್ಗಗಳಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದು ಮೂರು ದಿನಗಳಲ್ಲಿ ಅದು ಮುಗಿಯಲಿದೆ. ನಂತರ ಭಕ್ತರನ್ನು ಎರಡು ಮಾರ್ಗಗಳಲ್ಲೂ ಕಳುಹಿಸಲಾಗುವುದು ಎಂದು ಕಾಶ್ಮೀರ ವಿಭಾಗೀಯ ಆಯುಕ್ತ ವಿಜಯ್ ಕುಮಾರ್ ಭಿದೂರಿ ಹೇಳಿದರು.

ಈವರೆಗೆ 4.05 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಗುಹಾ ದೇವಸ್ಥಾನದಲ್ಲಿ ದರ್ಶನ ಪಡೆದಿದ್ದಾರೆ ಎಂದು ಅವರು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries