HEALTH TIPS

ಪೀರುಮೇಡು ಶಾಸಕ, ಸಿಪಿಐ ನಾಯಕ ವಜೂರ್ ಸೋಮನ್ ನಿಧನ

ತಿರುವನಂತಪುರಂ: ಪೀರುಮೇಡು ಶಾಸಕ ಮತ್ತು ಸಿಪಿಐ ನಾಯಕ ವಜೂರ್ ಸೋಮನ್ (72) ನಿಧನರಾದರು. ಅವರು ಹೃದಯಾಘಾತದಿಂದ ನಿನ್ನೆ ನಿಧನರಾದರು.

ತಿರುವನಂತಪುರಂ ನಗರದಲ್ಲಿ ನಡೆದ ಕಂದಾಯ ಇಲಾಖೆಯ ಇಡುಕ್ಕಿ ಜಿಲ್ಲಾ ಮಟ್ಟದ ಸಭೆಯಲ್ಲಿ ಭಾಗವಹಿಸಿ ಹಿಂತಿರುಗುವಾಗ ಹೃದಯಾಘಾತಕ್ಕೊಳಗಾದರು. ನಂತರ, ಅವರನ್ನು ತಕ್ಷಣ ಕಂದಾಯ ಸಚಿವರ ವಾಹನದಲ್ಲಿ ಶಾಸ್ತಾಮಂಗಲಂ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅವರ ಜೀವ ಉಳಿಸಲಾಗಲಿಲ್ಲ. ಅವರು ತೋಟ ಕಾರ್ಮಿಕರನ್ನು ಸಂಘಟಿಸುತ್ತಾ ಬೆಳೆದ ನಾಯಕರಾಗಿದ್ದರು. 


ನಿನ್ನೆ ಸಂಜೆ ಗಂಟೆಗೆ ಸಾರ್ವಜನಿಕ ದರ್ಶನಕ್ಕಾಗಿ ಮೃತದೇಹವನ್ನು ಎಂಎನ್ ಸ್ಮಾರಕದಲ್ಲಿ ಇರಿಸಲಾಗಿತ್ತು. ರಾತ್ರಿ ಪೀರುಮೇಡುಗೆ ಮೃತದೇಹವನ್ನು ಕೊಂಡೊಯ್ಯಲಾಯಿತು. 

2021 ರಲ್ಲಿ ವಜೂರ್ ಸೋಮನ್ ಕಾಂಗ್ರೆಸ್‍ನ ಸಿರಿಯಾಕ್ ಥಾಮಸ್ ಅವರನ್ನು ಪರಾಭವಗೊಳಿಸಿ ವಿಧಾನಸಭೆಯನ್ನು ಪ್ರವೇಶಿಸಿದ್ದರು. ಅವರು ಪೀರುಮೇಟ್‍ನಲ್ಲಿ ರೈತರು, ತೋಟ ಕಾರ್ಮಿಕರ ಸಮಸ್ಯೆಗಳು ಮತ್ತು ಭೂ ಸಮಸ್ಯೆಗಳನ್ನು ವಿವರವಾಗಿ ಅಧ್ಯಯನ ಮಾಡಿದ್ದರು ಮತ್ತು ವಿಧಾನಸಭೆಯ ಒಳಗೆ ಮತ್ತು ಹೊರಗೆ ಸಕ್ರಿಯರಾಗಿದ್ದರು. ಜನಮನ್ನಣೆಯ ಸರಳ ನಾಯಕರಾಗಿ ಗುರುತಿಸಿದ್ದರು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries