HEALTH TIPS

ಕುರುಡಪದವು ಹಿರಿಯ ಪ್ರಾಥಮಿಕ ಶಾಲಾ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ರಕ್ಷಕರಿಗೆ ಜಾಗೃತಿ ಸಭೆ

ಉಪ್ಪಳ: ಕುರುಡಪದವು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ರಕ್ಷಕರಿಗೆ ಮಾದಕದ್ರವ್ಯ ಬಳಕೆ ತಡೆಗಟ್ಟಲು ಶುಕ್ರವಾರ ಜಾಗೃತಿ ಸಭೆ ನಡೆಯಿತು. ರಕ್ಷಕ ಶಿಕ್ಷಕ ಅಧ್ಯಕ್ಷ ಬಷೀರ್ ಸಾಪೆÇ್ಟ್ಕೀ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಶಾಲಾ ಸಂರಕ್ಷಣಾ ಸಮಿತಿ ಸಂಯೋಜಕ ಪ್ರಶಾಂತ್ ಕುಮಾರ್ ಅಮ್ಮೇರಿ  ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಸಂರಕ್ಷಣಾ ಸಮಿತಿ ಸದಸ್ಯ, ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಕುಮಾರಿ ಟೀಚರ್ ಮಾದಕದ್ರವ್ಯ ಬಳಕೆ ತಡೆಗಟ್ಟಲು ಕೈಕೊಳ್ಳಬೇಕಾದ ಕ್ರಮಗಳ ಬಗ್ಗೆ ರಕ್ಷಕರಿಗೆ ಸವಿವರವಾಗಿ ವಿಚಾರಗಳನ್ನು ತಿಳಿಸಿಕೊಟ್ಟರು. 

ಅಗ್ನಿಶಾಮಕ ದಳದ ಅಧಿಕಾರಿ  ಸಂದೀಪ್ ಪಿ ಆರ್ , ವಿದ್ಯುತ್, ಜಲ, ಅಗ್ನಿ ಅವಘಡಗಳಿಂದ ಹೇಗೆ  ಸಂರಕ್ಷಣೆ ಪಡೆಯಬಹುದೆಂದು ರಕ್ಷಕರಿಗೆ ವಿವರವಾದ ಮಾಹಿತಿಯನ್ನು ತಿಳಿಸಿಕೊಟ್ಟರು. ಮಂಜೇಶ್ವರ ನಾಗರಿಕ ಸೇವಾ ಪೆÇೀಲೀಸ್ ಅಧಿಕಾರಿ ವಿಜಿತ್ ಎನ್,ಶಾಲಾ ಸಂರಕ್ಷಣಾ ಸಮಿತಿ ಸದಸ್ಯರೂ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಗೋಪಣ್ಣ ಎಂ, ಶಾಲಾ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಹಸೀನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಪದ್ಮನಾಭ ಬರ್ಲಾಯ ಸ್ವಾಗತಿಸಿ, 

ಶಿಕ್ಷಕಿ ಅರ್ಚನಾ ಟೀಚರ್ ವಂದಿಸಿದರು. ಶಾಲಾ ಹಿಂದಿ ಶಿಕ್ಷಕರಾದ ಸತೀಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries