HEALTH TIPS

ಬಿಜೆಪಿಯ ಮಾಜಿ ವಕ್ತಾರೆ ಆರತಿ ಅರುಣ್‌ ಸಾಠೆಗೆ ಹೆಚ್ಚುವರಿ ನ್ಯಾಯಮೂರ್ತಿ ಸ್ಥಾನ

ನವದೆಹಲಿ: ಮಹಾರಾಷ್ಟ್ರ ಬಿಜೆಪಿಯ ಮಾಜಿ ವಕ್ತಾರರಾದ ಆರತಿ ಅರುಣ್‌ ಸಾಠೆ ಸೇರಿದಂತೆ ಮೂವರು ವಕೀಲರನ್ನು ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ಬುಧವಾರ ನೇಮಕ ಮಾಡಲಾಗಿದೆ.

ಸಾಠೆ ಅವರು ಈ ಹಿಂದೆ ಬಿಜೆಪಿ ಮಹಾರಾಷ್ಟ್ರ ರಾಜ್ಯ ಘಟಕದ ವಕ್ತಾರರಾಗಿದ್ದರು.

ಕಾನೂನು ಇಲಾಖೆ ಮಾಹಿತಿ ಪ್ರಕಾರ ಆರತಿ ಅರುಣ್‌ ಸಾಠೆ, ಸುಶಿಲ್ ಮನೋಹರ್‌ ಘೋಡೇಶ್ವರ್ ಮತ್ತು ಅಜಿತ್ ಭಗವಾನ್ ರಾವ್ ಕಡೆತನಕರ್ ಅವರನ್ನು ನ್ಯಾಯಮೂರ್ತಿಗಳಾಗಿ ನೇಮಿಸಲಾಗಿದೆ.

ಹೈಕೋರ್ಟ್‌ಗಳಿಗೆ ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಎರಡು ವರ್ಷಗಳ ಅವಧಿಗೆ ನೇಮಕ ಮಾಡಲಾಗುತ್ತದೆ. ಆ ಬಳಿಕ ಅವರಿಗೆ ಕಾಯಂ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries