HEALTH TIPS

ತೈವಾನ್‌: ಭಾರತದ ನಿಲುವು ಅಚಲ; ಕೇಂದ್ರ

ನವದೆಹಲಿ: 'ತೈವಾನ್‌ ಕುರಿತಂತೆ ಭಾರತದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ' ಎಂದು ಸರ್ಕಾರದ ಮೂಲಗಳು ಮಂಗಳವಾರ ಸ್ಪಷ್ಟಪಡಿಸಿವೆ.

'ವಿಶ್ವದ ಇತರ ರಾಷ್ಟ್ರಗಳಂತೆ, ಭಾರತ ಕೂಡ ತೈವಾನ್‌ ಜೊತೆ ದ್ವಿಪಕ್ಷೀಯ ಸಂಬಂಧ ಹೊಂದಿದೆ. ಆರ್ಥಿಕತೆ, ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಒಪ್ಪಂದಗಳ ಮೇಲೆ ಈ ಸಂಬಂಧ ಕೇಂದ್ರೀಕೃತವಾಗಿದೆ' ಎಂದು ಕೇಂದ್ರ ಸರ್ಕಾರ ಹೇಳಿದ್ದಾಗಿ ಇವೇ ಮೂಲಗಳು ತಿಳಿಸಿವೆ.

ಸಚಿವ ಎಸ್‌.ಜೈಶಂಕರ್‌ ಅವರು ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಸೋಮವಾರ ಮಾತುಕತೆ ನಡೆಸಿದ ಬಳಿಕ ಚೀನಾ ವಿದೇಶಾಂಗ ಸಚಿವಾಲಯ ಹೇಳಿಕೆಯೊಂದನ್ನು ಬಿಡುಗಡೆ ಮಾಡಿತ್ತು.

'ಭಾರತವು ತೈನಾನ್‌ಅನ್ನು ಚೀನಾದ ಭಾಗವೆಂದು ಭಾರತ ಪರಿಗಣಿಸುತ್ತದೆ ಎಂಬುದಾಗಿ ಜೈಶಂಕರ್‌ ಅವರ ವಾಂಗ್‌ ಯಿ ಅವರಿಗೆ ಸೋಮವಾರದ ಸಭೆಯಲ್ಲಿ ಹೇಳಿದ್ದರು' ಎಂಬುದಾಗಿ ಈ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿತ್ತು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಈ ಸ್ಪಷ್ಟನೆ ನೀಡಿದೆ.

ಈ ಬೆಳವಣಿಗೆಗಳ ನಂತರ, 'ಜೈಶಂಕರ್‌ ಅವರ ಹೇಳಿಕೆಯನ್ನು ಚೀನಾ ವಿದೇಶಾಂಗ ಸಚಿವಾಲಯ ತಪ್ಪಾಗಿ ಉಲ್ಲೇಖಿಸಿತ್ತು' ಎಂದೂ ಮೂಲಗಳು ಹೇಳಿವೆ.

ಚೀನಾ ಹೇಳಿಕೆ ಕುರಿತು ಅಚ್ಚರಿ ವ್ಯಕ್ತಪಡಿಸಿದ್ದ ಸಚಿವ ಜೈಶಂಕರ್‌, 'ಗಡಿ ವಿಚಾರವಾಗಿ ಭಾರತದೊಂದಿಗೆ ಯಾವ ರೀತಿ ಚೀನಾ ವ್ಯವಹರಿಸುತ್ತಿದೆಯೋ ಅದೇ ರೀತಿ ತೈವಾನ್‌ನೊಂದಿಗೂ ವ್ಯವಹರಿಸುತ್ತಿದೆ' ಎಂದು ಪ್ರತಿಕ್ರಿಯಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries