HEALTH TIPS

ಮಹಿಳೆಯರು ಯಾರ ವಿರುದ್ಧ ದೂರು ನೀಡುತ್ತಿದ್ದಾರೆ ಎಂಬುದನ್ನು ಬಹಿರಂಗವಾಗಿ ಹೇಳಲು ಧೈರ್ಯ ತೋರಿಸಬೇಕು; ಮಹಿಳಾ ಆಯೋಗದ ಅಧ್ಯಕ್ಷೆ: ಪಿ ಸತಿದೇವಿ

ತಿರುವನಂತಪುರಂ: ಮಹಿಳೆಯರು ಯಾರ ವಿರುದ್ಧ ದೂರು ನೀಡುತ್ತಿದ್ದಾರೆ ಎಂಬುದನ್ನು ಬಹಿರಂಗವಾಗಿ ಹೇಳಲು ಧೈರ್ಯ ತೋರಿಸಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಪಿ ಸತಿದೇವಿ ಹೇಳಿದ್ದಾರೆ. ಯಾವುದೇ ವ್ಯವಸ್ಥೆಯು ಊಹಾಪೆÇೀಹದ ಆಧಾರದ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದವರು ಸೂಚಿಸಿದರು.

ಹುಡುಗಿಯರು ದೂರು ನೀಡಲು ಹಿಂಜರಿಯಬಾರದು ಮತ್ತು ಆಯೋಗದಲ್ಲಿ ದೂರು ಬಂದರೆ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಾಗುವುದು ಎಂದು ಸತಿದೇವಿ ಹೇಳಿದರು. ಶಾಸಕ ರಾಹುಲ್ ಮಾಂಗೂಟತ್ತಿಲ್ ವಿರುದ್ಧ ಕೇಳಿಬಂದ ಆರೋಪಗಳ ಹಿನ್ನೆಲೆಯಲ್ಲಿ ಸತಿದೇವಿ ಅವರ ಈ ಹೇಳಿಕೆ ಬಂದಿದೆ.

ಏತನ್ಮಧ್ಯೆ, ದೂರು ದಾಖಲಿಸಿದ ಯುವ ನಟಿ ರಿನಿ ಆನ್ ಜಾರ್ಜ್, ರಾಜೀನಾಮೆ ಬಗ್ಗೆ ತನಗೆ ವೈಯಕ್ತಿಕವಾಗಿ ಸಂತೋಷವಿಲ್ಲ ಮತ್ತು ಅದರಲ್ಲಿ ಯಾವುದೇ ವೈಯಕ್ತಿಕ ಆಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಿರಂತರವಾಗಿ ಎತ್ತಲಾಗುತ್ತಿರುವ ಆರೋಪಗಳನ್ನು ಸಾಬೀತುಪಡಿಸಬೇಕಾಗಿದೆ. ಆರೋಪಗಳು ಗಂಭೀರವಾಗಿವೆ. ಎಲ್ಲಾ ಆರೋಪಗಳನ್ನು ತನಿಖೆ ಮಾಡಬೇಕು. ಆರೋಪಗಳನ್ನು ಮಾಡಿರುವವರು ಭಯಭೀತರಾಗಿರಬಹುದು ಎಂದು ರಿನಿ ಹೇಳಿದರು. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries