HEALTH TIPS

ಬ್ರಿಟನ್‌ನ 'ಈಗ ಗಡೀಪಾರು, ನಂತರ ವಿಚಾರಣೆ' ಯೋಜನೆಯಲ್ಲಿ ಭಾರತ ಸೇರ್ಪಡೆ

 ಲಂಡನ್: ಶಿಕ್ಷೆಗೆ ಗುರಿಯಾಗುವ ವಿದೇಶಿ ಅಪರಾಧಿಗಳ ಮೇಲ್ಮನವಿ ಅರ್ಜಿಯ ವಿಚಾರಣೆಗೂ ಮುನ್ನವೇ ಅಂಥವರನ್ನು ಗಡೀಪಾರು ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತವನ್ನೂ ಸೇರಿಸಲಾಗಿದೆ.

ಬ್ರಿಟನ್‌ಗೆ ವಲಸೆ ಹೋಗುವವರ ಸಂಖ್ಯೆಯನ್ನು ಕಡಿಮೆ ಮಾಡುವ ಕ್ರಮದ ಭಾಗವಾಗಿ ಬ್ರಿಟನ್‌ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.


'ಈಗ ಗಡೀಪಾರು, ನಂತರ ವಿಚಾರಣೆ' ಯೋಜನೆಯು 23 ದೇಶಗಳ ಅಪರಾಧಿಗಳಿಗೆ ಅನ್ವಯವಾಗಲಿದೆ. ಈ ಮೊದಲು ಎಂಟು ದೇಶಗಳಿಗೆ ಮಾತ್ರ ಅನ್ವಯವಾಗುತ್ತಿತ್ತು. ಯೋಜನೆಯ ಪ್ರಕಾರ, ಈ ದೇಶಗಳ ಅಪರಾಧಿಗಳನ್ನು ಶಿಕ್ಷೆಗೆ ಗುರಿಯಾದ ಕೂಡಲೇ ಗಡೀಪಾರು ಮಾಡಲಾಗುತ್ತದೆ ಎಂದು ಬ್ರಿಟನ್‌ನ ಗೃಹ ಕಚೇರಿಯು ತಿಳಿಸಿದೆ.

ಗಡೀಪಾರಾದ ವಿದೇಶಿಗರು ವಿಡಿಯೊ ಟೆಕ್ನಾಲಜಿ ಮೂಲಕ ಮೇಲ್ಮನವಿ ಅರ್ಜಿ ವಿಚಾರಣೆಗೆ ಹಾಜರಾಗಬಹುದು ಎಂದು ಹೇಳಿದೆ.

'ನಮ್ಮ ದೇಶದಲ್ಲಿ ಅಪರಾಧ ಎಸಗುವವರಿಗೆ ನಮ್ಮ ವ್ಯವಸ್ಥೆಯನ್ನು ಹಾಳುಗೆಡವಲು ಅವಕಾಶ ನೀಡುವುದಿಲ್ಲ. ಹೀಗಾಗಿ ಅಂಥವರಿಗೆ ಈ ಮೂಲಕ ಸ್ಪಷ್ಟ ಸಂದೇಶ ರವಾನಿಸುತ್ತಿದ್ದೇವೆ. ನಮ್ಮ ನೆಲದ ಕಾನೂನನ್ನು ಗೌರವಿಸಬೇಕು ಮತ್ತು ಪಾಲಿಸಬೇಕು' ಎಂದು ಗೃಹ ಕಾರ್ಯದರ್ಶಿ ಯವಿಟ್ ಕೂಪರ್‌ ತಿಳಿಸಿದರು.    







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries