HEALTH TIPS

ಭಾರೀ ಮಳೆ: ರಾತ್ರಿ ಮತ್ತು ಬೆಳಗಿನ ವೇಳೆ ಹೊರ ತೆರಳುವಾಗ ತೀವ್ರ ಎಚ್ಚರಿಕೆ ಸೂಚನೆ ನಿಡಿದ ಕೆ.ಎಸ್.ಇ.ಬಿ.

ತಿರುವನಂತಪುರಂ: ಪ್ರಬಲ ಗಾಳಿ ಮತ್ತು ಮಳೆಯಿಂದಾಗಿ, ಮರದ ಕೊಂಬೆಗಳು ಬೀಳುವ ಅಥವಾ ವಿದ್ಯುತ್ ತಂತಿಗಳು ಮುರಿಯುವ ಅಥವಾ ವಾಲುವ ಸಾಧ್ಯತೆ ಇದ್ದು, ಜನರು ಜಾಗರೂಕರಾಗಿರಬೇಕು ಎಂದು ಕೆಎಸ್‍ಇಬಿ ಎಚ್ಚರಿಸಿದೆ. ರಾತ್ರಿ ಮತ್ತು ಬೆಳಗಿನ ವೇಳೆ ಹೊರಗೆ ಹೋಗುವಾಗ ತೀವ್ರ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.

ವಿದ್ಯುತ್ ಪ್ರವಾಹದ ಸಾಧ್ಯತೆ ಇರುವುದರಿಂದ ಮುರಿದ ಲೈನ್‍ನ ಹತ್ತಿರ ಮಾತ್ರವಲ್ಲದೆ ಸುತ್ತಮುತ್ತಲಿನ ಪ್ರದೇಶಗಳನ್ನೂ ಮುಟ್ಟಬಾರದು. ಸರ್ವಿಸ್ ವೈರ್, ಸ್ಟೇ ವೈರ್ ಮತ್ತು ವಿದ್ಯುತ್ ಕಂಬಗಳನ್ನು ಮುಟ್ಟದಂತೆ ಎಚ್ಚರಿಕೆ ವಹಿಸಬೇಕು.

ವಿದ್ಯುತ್ ಅಪಘಾತ ಅಥವಾ ಸಂಭಾವ್ಯ ಅಪಘಾತವನ್ನು ಗಮನಿಸಿದರೆ, ಸಾಧ್ಯವಾದಷ್ಟು ಬೇಗ ಹತ್ತಿರದ ಕೆಎಸ್‍ಇಬಿ ಸೆಕ್ಷನ್ ಕಚೇರಿ ಅಥವಾ ತುರ್ತು ಸಂಖ್ಯೆ 9496010101 ಗೆ ತಿಳಿಸಲು ಸೂಚಿಸಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries