HEALTH TIPS

SIR | 7ರಂದು 'ಇಂಡಿಯಾ' ಸಭೆ: 8ಕ್ಕೆ ಚುನಾವಣಾ ಆಯೋಗದತ್ತ ಪ್ರತಿಭಟನಾ ಮೆರವಣಿಗೆ

ನವದೆಹಲಿ: ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (ಎಸ್‌ಐಆರ್‌) ವಿರುದ್ಧ ಕೈಗೊಂಡಿರುವ ಹೋರಾಟದ ಕಾರ್ಯತಂತ್ರ ಕುರಿತು ಚರ್ಚಿಸಲು ವಿರೋಧ ಪಕ್ಷಗಳ ಒಕ್ಕೂಟ 'ಇಂಡಿಯಾ'ದ ನಾಯಕರು ಆಗಸ್ಟ್‌ 7ರಂದು ಸಭೆ ನಡೆಸುವ ನಿರೀಕ್ಷೆ ಇದೆ ಎಂದು ಮೂಲಗಳು ಭಾನುವಾರ ಹೇಳಿವೆ.

'ಎಸ್‌ಐಆರ್‌' ಪ್ರಕ್ರಿಯೆ ವಿರೋಧಿಸಿ ಆಗಸ್ಟ್‌ 8ರಂದು ಚುನಾವಣಾ ಆಯೋಗದ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯೋಜಿಸಿದ್ದಾರೆ ಎಂದೂ ಮೂಲಗಳು ಹೇಳಿವೆ.

'ಇಂಡಿಯಾ' ನಾಯಕರು ಆಗಸ್ಟ್‌ 7ರಂದು ಔತಣಕೂಟ ಹಮ್ಮಿಕೊಂಡಿದ್ದು, ಅದೇ ವೇಳೆ ನಡೆಯುವ ಸಭೆಯಲ್ಲಿ, ಹೋರಾಟದ ರೂಪುರೇಷೆ ಕುರಿತು ಚರ್ಚಿಸುವರು ಎಂದು ಇವೇ ಮೂಲಗಳು ತಿಳಿಸಿವೆ.

ಉಪರಾಷ್ಟ್ರಪತಿ ಚುನಾವಣೆ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಮೈತ್ರಿಕೂಟದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ವಿಪಕ್ಷಗಳ ಅನೇಕ ನಾಯಕರು ಒಲವು ಹೊಂದಿರುವ ಕಾರಣ, ಸಭೆ ಕುತೂಹಲ ಮೂಡಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries