ಫೆಡರೇಷನ್ ಆಫ್ ಅಸೋಸಿಯೇಷನ್ ಆಫ್ ತೆಲಂಗಾಣ ಹೈಯರ್ ಎಜುಕೇಷನ್ (ಎಫ್ಎಟಿಎಚ್ಐ) ಭಾನುವಾರ ಸಭೆ ನಡೆಸಿದ ಬಳಿಕ ಕಾಲೇಜುಗಳನ್ನು ಮುಚ್ಚುವ ನಿರ್ಧಾರ ಕೈಗೊಂಡಿದೆ. ಸರ್ಕಾರದ ಶುಲ್ಕ ಮರುಪಾವತಿ ಯೋಜನೆಯಡಿ ₹7,500 ಕೋಟಿ ಬಿಡುಗಡೆಗೆ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಎಫ್ಎಟಿಎಚ್ಐ ಈ ತೀರ್ಮಾನ ಕೈಗೊಂಡಿದೆ.
ಶಿಕ್ಷಣ ಸಂಸ್ಥೆಗಳು ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವುದರಿಂದಾಗಿ ಶಿಕ್ಷಕರು ಮತ್ತು ಸಿಬ್ಬಂದಿಗೆ ಹಲವು ತಿಂಗಳುಗಳಿಂದ ವೇತನ ನೀಡಿಲ್ಲ ಮತ್ತು ತರಗತಿಗಳು ಸುಗಮವಾಗಿ ನಡೆಯದೆ ವಿದ್ಯಾರ್ಥಿಗಳಿಗೂ ತೊಂದರೆಯಾಗಿದೆ ಎಂದು ಆಡಳಿತ ಮಂಡಳಿಗಳು ತಿಳಿಸಿವೆ.
'ಭಾನುವಾರ ನಡೆದ ಸಭೆಯಲ್ಲಿ ಸೆಪ್ಟೆಂಬರ್ 15ರಂದು ಎಂಜಿನಿಯರಿಂಗ್ ದಿನವನ್ನು 'ಕರಾಳ ದಿನ'ವಾಗಿ ಆಚರಿಸಲು ಮತ್ತು ಸರ್ಕಾರ ಬೇಡಿಕೆಯನ್ನು ಈಡೇರಿಸುವವರೆಗೆ ಅನಿರ್ದಿಷ್ಟಾವಧಿಗೆ ಕಾಲೇಜುಗಳನ್ನು ಮುಚ್ಚಲು ನಿರ್ಧರಿಸಲಾಯಿತು' ಎಂದು ಎಫ್ಎಟಿಎಚ್ಐ ಅಧ್ಯಕ್ಷ ಎನ್.ರಮೇಶ್ ಬಾಬು ತಿಳಿಸಿದರು.




