ಬದಿಯಡ್ಕ: ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ನ ವಾರ್ಷಿಕ ಮಹಾಸಭೆ ನೀರ್ಚಾಲು ಪ್ರಧಾನ ಕಚೇರಿಯ ಸಭಾ ಭವನದಲ್ಲಿ ಶನಿವಾರ ಜರಗಿತು. 2025 ಮಾರ್ಚ್ 31ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ಒಟ್ಟು 222.85 ಕೋಟಿ ರೂಪಾಯಿಗಳ ಒಟ್ಟು ವ್ಯವಹಾರವನ್ನು ನಡೆಸಿರುತ್ತದೆ. ವಾರ್ಷಿಕ ಅಂಕಿ ಅಂಶಗಳ ಪ್ರಕಾರ ಬ್ಯಾಂಕ್ 34.67 ಲಕ್ಷರೂಗಳ ನಿರ್ವಹಣಾ ಲಾಭವನ್ನು ಗಳಿಸಿದ್ದು, ಸದಸ್ಯರಿಗೆ 10 ಶೇಕಡಾ ಲಾಭಾಂಶವನ್ನು ಘೋಷಿಸಲಾಯಿತು.
ಅಧ್ಯಕ್ಷ ಗಣಪತಿಪ್ರಸಾದ ಕುಳಮರ್ವ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತಾ ಗ್ರಾಹಕರ ನಿರಂತರ ಪ್ರೋತ್ಸಾಹ ಸಹಕಾರ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದರು. ಕಾರ್ಯದರ್ಶಿ ಅಜಿತಕುಮಾರಿ ವಾರ್ಷಿಕ ವರದಿ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕರುಗಳಾದ ಸುಬ್ರಹ್ಮಣ್ಯ ಭಟ್ ಏನಂಕೂಡ್ಲು, ರವಿ ಕೆ. ನೀರ್ಚಾಲು, ಕೃಷ್ಣ ಭಟ್ ವಳಕ್ಕುಂಜ, ಶ್ಯಾಮ ಭಟ್ ಮಲ್ಲಡ್ಕ, ರಮ್ಯಾ ದರ್ಬೆತ್ತಡ್ಕ, ಸ್ಮಿತಾ ಬೇಳ, ವಿದ್ಯಾಶಂಕರಿ ವಾಶೆ, ಅಜೇಯ ಶಂಕರ ಖಂಡಿಗೆ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷರುಗಳಾದ ಶ್ರೀಕೃಷ್ಣ ಭಟ್ ವಾಶೆಮನೆ, ಕೋರಿಕ್ಕಾರು ವಿಷ್ಣು ಭಟ್, ಜಯದೇವ ಖಂಡಿಗೆ ಸಲಹೆ ಸೂಚನೆಗಳನ್ನು ನೀಡಿದರು. ಉಪಾಧ್ಯಕ್ಷ ಅವಿನಾಶ್ ರೈ ಬದಿಯಡ್ಕ ಸ್ವಾಗತಿಸಿ, ನಿರ್ದೇಶಕ ರಾಮಪ್ಪ ಮಂಜೇಶ್ವರ ವಂದಿಸಿದರು.




.jpg)
