HEALTH TIPS

22 ರಿಂದ ಕಾಸರಗೋಡು ದಸರಾ ಸಾಂಸ್ಕøತಿಕೋತ್ಸವ-2025' ಕಾರ್ಯಕ್ರಮ

ಕಾಸರಗೋಡು: ನಗರದ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ "ಶ್ರೀ ದುಗಾರ್ಂಬ ವೇದಿಕೆ" ಯಲ್ಲಿ ಸೆ. 22 ರಿಂದ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ-2025 ಕಾರ್ಯಕ್ರಮ ಜರುಗಲಿದೆ. 

ಕನ್ನಡ ಭವನದ ಸಂಸ್ಥಾಪಕ ವಾಮನ್ ರಾವ್ ಬೇಕಲ್ ಸಾರಥ್ಯದಲ್ಲಿ  ದಸರಾ ಸಾಂಸ್ಕøತಿಕೋತ್ಸವ ನಡೆದುಬರುತ್ತಿದೆ. ಅ. 1ರ ವರೆಗೆ ಕರ್ಯಕ್ರಮ ನಡೆಯುವುದು.  ಸೆ.22 ರಂದು ಬೆಳಿಗ್ಗೆ 11ಕ್ಕೆ  ಧಾರ್ಮಿಕ, ಸಾಮಾಜಿಕ ಮುಂದಾಳು ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಸಮಾರಂಭ ಉದ್ಘಾಟಿಸುವರು, ಕ್ಷೇತ್ರ ಪಾತ್ರಿ ಪಾಂಗೋಡು ಪ್ರವೀಣ್ ನಾಯಕ ದೀಪ ಪ್ರಜ್ವಲನೆ ಗೈಯುವರು. ದಾರ್ಮಿಕ ಮುಂದಾಳು ಡಾ. ಅನಂತ ಕಾಮತ್, ಪಾಂಗೋಡು ಕ್ಷೇತ್ರ ಸಮಿತಿ ಅಧ್ಯಕ್ಷ ನಾಗೇಶ್ ಪಿ.ನಾಯಕ, ದ.ಕ.ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಡಾ.  ಮಂಜುಳಾ ಅನಿಲ್ ರಾವ್ ಗೌರವ ಉಪಸ್ಥಿತರಿರುವರು.

ದಾರ್ಮಿಕ ಮುಂದಾಳು ಅರಿಬೈಲು ಗೋಪಾಲ ಶೆಟ್ಟಿ ಅಧ್ಯಕ್ಷತೆ ವಹಿಸುವರು, ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ,  ಶ್ರೀಧರ್ ಶೆಟ್ಟಿ ಮುಟ್ಟಂ,  ಶ್ರೀಧರ್ ಶೆಟ್ಟಿ ಮುಟ್ಟಂ, ಪ್ರದೀಪ್ ಬೇಕಲ್,  ಅಖಿಲೇಶ್ ನಗುಮುಗಂ,  ವಿಶಾಲಾಕ್ಷ ಪುತ್ರಕಳ,  ಗಂಗಾಧರ ತೆಕ್ಕೆಮೂಲೆ,  ಜಗನ್ನಾಥ ಶೆಟ್ಟಿ,  ವಸಂತ ಬಾರಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು 

ಈ ಸಂದರ್ಭ 12 ವರ್ಷದ ದಾಸ ಸಂಕೀರ್ತನಾ ದಶಾಹ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರು ಸಂಕೀರ್ತನೆ ಹಾಡುವ ಮೂಲಕ ದಾಸ ಸಂಕೀರ್ತನಾ ಕಾರ್ಯಕ್ರಮ ಉದ್ಘಾಟಿಸುವರು ಸುಮಾರು 30 ತಂಡಗಳು ಭಜನಾ ಸತ್ಸಮಗದಲ್ಲಿ ಭಾಗವಹಿಸಸಲಿದೆ.

ಸೆ. 24ರಂದು ನಡೆಯುವ ಕಾಸರಗೋಡು ದಸರಾ ಕಾರ್ಯಕ್ರಮದಲ್ಲಿ ಸಾಹಿತಿ ಲೇಖಕ ರವಿ ನಾಯ್ಕಾಪು ಇವರಿಗೆ ಗೌರವಾಪರ್ಪಣೆ, 26 ರಂದು ರಾಮಕ್ಣತ್ರಿಯ ಸಮಾಜ ನಡೆದು ಬಂದ ಹಾದಿ ಎಂಬ ವಿಷಯದ ಬಗ್ಗೆ ವಿಚಾರ ಗೋಷ್ಠ, 27 ರಂದು ಕಾಸರಗೋಡು ದಸರಾ ಕವಿ ಗೋಷ್ಠಿ, 28 ರಂದು 'ಮರೆಯಲಾಗದವರು ಕೃತಿ ಲೋಕಾರ್ಪಣೆ, ಸಂಸ್ಕರಣೆ, ಗಣ್ಯರಿಗೆ ದಸರಾ ಸಾಧಕ ಸನ್ಮಾನ, 29 ಕ್ಕೆ ಕುಮಾರಿ ಅನ್ವಿತಾ ಸಂತೋಷ್ ಬಳಗದವರಿಂದ "ಭಕ್ತಿ ನಾಮಾಮೃತ" 30 ಕ್ಕೆ ಜಯಶ್ರೀ ದಿವಾಕರ ಅಶೋಕ ನಗರ ಸಾರಥ್ಯದಲ್ಲಿ "ನೃತ್ಯ ವೈಭವ" ನಡೆಯುವುದು.

ಪಾಂಗೋಡು ಕ್ಷೇತ್ರ ಸಾಂಸ್ಕøತಿಕ ಘಟಕ, ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು  ಸಹಯೋಗದೊಂದಿಗೆ ಕನ್ನಡ ಭವನ ಮತ್ತು ಗ್ರಂಥಾಲಯ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಕನ್ನಡ ಭವನ ಕಾರ್ಯದರ್ಶಿ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries