ಮತಗಳ್ಳತನ ಬಗ್ಗೆ ಗುರುವಾರ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಆಳಂದ ಕ್ಷೇತ್ರದಲ್ಲಿ 6,018 ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಪ್ರಯತ್ನ ನಡೆದಿದೆ.
ಆದರೆ ತೆಗೆದು ಹಾಕಲಾದ ನೈಜ ಸಂಖ್ಯೆ ಗೊತ್ತಾಗಿಲ್ಲ. ಆದರೆ ಅದರ ಸಂಖ್ಯೆ ಇನ್ನೂ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.
ಈ ಮತಗಳ್ಳತವನ್ನು ಯಾರೋ ಪತ್ತೆ ಹಚ್ಚಿದ್ದಾರೆ. ಸಾಧಾರಣ ಎಲ್ಲಾ ಅಪರಾಧಗಳಲ್ಲಿ ಆಗುವಂತೆ, ಇಲ್ಲಿಯೂ ಕಾಕತಾಳೀಯ ಎನ್ನುವಂತೆ ಕಳ್ಳತನ ಬಯಲಾಗಿದೆ. ತಮ್ಮ ಚಿಕ್ಕಪ್ಪನ ಹೆಸರು ಮತದಾರರ ಪಟ್ಟಿಯಿಂದ ಕಾಣೆಯಾಗಿದ್ದು ಬೂತ್ ಮಟ್ಟದ ಅಧಿಕಾರಿಗೆ ಗೊತ್ತಾಗಿದೆ. ಹೆಸರನ್ನು ತೆಗೆದು ಹಾಕಿದ್ದು ಯಾರು ಎಂದು ಪರಿಶೀಲಿಸಿದಾಗ, ನೆರೆಮನೆಯವರೆಂದು ಗೊತ್ತಾಗಿದೆ. ಆದರೆ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲ್ಪಟ್ಟವರಿರೂ, ತೆಗೆದು ಹಾಕಿದವರಿಗೂ ಈ ವಿಷಯ ತಿಳಿದೇ ಇಲ್ಲ. ಯಾವುದೋ ಒಂದು ಶಕ್ತಿ ಇಡೀ ಪ್ರಕ್ರಿಯೆಯನ್ನು ಹೈಜಾಕ್ ಮಾಡಿ ಮತದಾರರ ಪಟ್ಟಿಯಿಂದ ಹೆಸರು ಅಳಿಸಿ ಹಾಕಿದೆ. ಸುದೈವವಶಾತ್ ನಮಗೆ ಅದು ಸಿಕ್ಕಿತು' ಎಂದು ರಾಹುಲ್ ಗಾಂಧಿ ಹೇಳಿದ್ದನ್ನು ಕಾಂಗ್ರೆಸ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.




