HEALTH TIPS

ಮಣಿಪುರ: ಪತ್ರಕರ್ತನ ಮೇಲೆ ದಾಳಿ

ಇಂಫಾಲ್‌/ಗುವಾಹಟಿ: ಮಣಿಪುರದ ಸೇನಾಪತಿ ಜಿಲ್ಲೆಯಲ್ಲಿ ಹೂವಿನ ಉತ್ಸವದ ವರದಿ ಮಾಡಲು ಹೋಗಿದ್ದ ಟಿವಿ ಪತ್ರಕರ್ತರೊಬ್ಬರ ಮೇಲೆ ಗುಂಡು ಹಾರಿಸಲಾಗಿದೆ.

ನಾಗಲ್ಯಾಂಡ್‌ ಮೂಲದ ಹಾರ್ನ್‌ಬಿಲ್‌ ಟಿವಿಯ ಪತ್ರಕರ್ತ ದೀಪ್‌ ಸೈಕಿಯಾ ಅವರ ಕಂಕುಳು ಮತ್ತು ಕಾಲುಗಳಿಗೆ ಗುಂಡೇಟಿನ ಗಾಯಗಳಾಗಿವೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ನಾಗಾ ಸಮುದಾಯವು ಪ್ರಾಬಲ್ಯವಿರುವ ಜಿಲ್ಲೆಯ ಲಾಯಿ ಗ್ರಾಮದಲ್ಲಿ ಶನಿವಾರ ಸಂಜೆ ಘಟನೆ ನಡೆದಿದ್ದು, ಸೈಕಿಯಾ ಅವರು ಜೀನಿಯಾ ಹೂವಿನ ಉತ್ಸವದಲ್ಲಿ ವರದಿ ಮಾಡುತ್ತಿದ್ದಾಗ ದಾಳಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸ್ಥಳೀಯರು ಬಂದೂಕು ಸಮೇತ ದಾಳಿಕೋರನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ದಾಳಿ ಹಿಂದಿನ ಕಾರಣವೇನೆಂಬುದನ್ನು ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.   


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries