HEALTH TIPS

ಸ್ವಚ್ಛತಾ ದಿನಾಚರಣೆ- ಸೇವಾ ಭಾರತಿಯಿಂದ ಸೀತಾಂಗೋಳಿ ಪೇಟೆ ಶುಚೀಕರಣ

ಕುಂಬಳೆ: ಸ್ವಚ್ಛತಾ ದಿನಾಚರಣೆಯಂಗವಾಗಿ ದೇಶೀಯ ಸೇವಾ ಭಾರತಿಯ ಪುತ್ತಿಗೆ ಘಟಕದ ಆಶ್ರಯದಲ್ಲಿ ಶನಿವಾರ ಸೀತಾಂಗೋಳಿ ಪೇಟೆಯನ್ನು ಮಾಲಿನ್ಯ ಮುಕ್ತಗೊಳಿಸಲಾಯಿತು. ಪೇಟೆಯ ಸುತ್ತಮುತ್ತಲಿನ ಪ್ರದೇಶದಲ್ಲಿನ ಪ್ಲಾಸ್ಟಿಕ್, ಕಾಗದ ಸೇರಿದಂತಿರುವ ಕಸಗಳನ್ನು ಸ್ವಚ್ಛಗೊಳಿಸಿ ಜನತೆಗೆ ಸ್ವಚ್ಛತೆಯ ಕುರಿತಾಗಿ ಉತ್ತಮ ಸಂದೇಶವನ್ನು ನೀಡಲಾಯಿತು. 

ಪ್ರವೀಣ್ ಕುಮಾರ್, ಅಪ್ಪಣ್ಣ, ಉಮಲತಾ, ದಿನೇಶ್ ಬಬ್ಬರಿಯಕಲ್ಲು, ಉಷಾ, ಶಶಿಕಲಾ ಅನೋಡಿಪಳ್ಳ, ಪ್ರಸನ್ನ, ಅಜಿತ್ ಕುಮಾರ್, ಅರುಣ್ ಕುಮಾರ್, ಉದಯ ಮರಕ್ಕಾಡ್ ಮೊದಲಾದವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸುತ್ತು ಮುತ್ತಲಿನ ಸೇವಾ ಭಾರತಿಯ ಕಾರ್ಯಕರ್ತರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು. ಸ್ವಚ್ಛತೆಯ ಮೂಲಕ ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸುವ ಅಗತ್ಯದ ಬಗ್ಗೆ ಪ್ರಮುಖರು ಮಾತನಾಡಿದರು. ಸೇವಾ ಭಾರತಿಯ ಸೇವಾ ಕಾರ್ಯಗಳು ನಿರಂತರ ಮುಂದುವರಿಯಲಿದ್ದು, ಸಮಾಜದ ಸಹಕಾರವನ್ನು ನಿರೀಕ್ಷಿಸುವುದಾಗಿ ಅವರು ತಿಳಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries