HEALTH TIPS

ನಾಪತ್ತೆಯಾಗಿದ್ದ ಯುವಕನ ಮೃತದೇಹ ಹೊಳೆಯಲ್ಲಿ ಪತ್ತೆ

ಕಾಸರಗೋಡು: ಪೆರಿಯ ಆಯಂಕಡವು ಹೊಳೆಯಲ್ಲಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಆಯಂಕಡವು ಸನಿಹದ ಬಂಗಾಡ್ ಹೊಳೆಯಲ್ಲಿ ಪತ್ತೆಯಾಗಿದೆ. ಉದುಯಪುರಂ ತಡಿಯಂವಳಪ್ಪು ನಿವಾಸಿ, ಶೋರೂಮ್ ಸಿಬ್ಬಂದಿ ಸಜಿತ್‍ಲಾಲ್(26)ಮೃತಪಟ್ಟ ಯುವಕ. ಶೋರೂಮ್‍ನಲ್ಲಿ ನಡೆಯುವ ಓಣಂ ಆಚರಣೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವುದಾಗಿ ಮನೆಯವರಲ್ಲಿ ತಿಳಿಸಿ  ಸಜಿತ್‍ಲಾಲ್ ಸೆ. 4ರಂದು ಹೊರಟವರು ನಾಪತ್ತೆಯಾಗಿದ್ದರು. ಇವರ ಚಪ್ಪಲಿ, ಬೈಕ್, ಹಾಗೂ ಹೆಲ್ಮೆಟ್ ಸೇತುವೆ ಸನಿಹದಿಂದ ಪತ್ತೆಹಚ್ಚಲಾಗಿತ್ತು. ಹೊಳೆಗೆ ಧುಮುಕಿರುವ ಸಂಶಯದಿಂದ ಅಗ್ನಿಶಾಮಕದಳ, ಪೊಲೀಸ್ ಹಾಗೂ ಸ್ಥಳೀಯ ನಿವಾಸಿಗಳು ಹುಡುಕಾಟ ನಡೆಸಿದ್ದರೂ, ಇವರನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಈ ಮಧ್ಯೆಸೆ. 8ರಂದು ಇವರ ಮೃತದೇಹ ಬಾಂಗಾಡ್ ಹೊಳೆ ಸನಿಹದ ಮರದಲ್ಲಿ ಸಿಲುಕಿಕೊಂಡ ಸ್ಥಿತಿಯಲ್ಲಿ ಪತ್ತಯಾಗಿದೆ. ಬೇಕಲ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries