ಕಾಸರಗೋಡು: ಅಧ್ಯಾಪಕರ ಮಾನ್ಯತಾ ಪರೀಕ್ಷೆ ಕೆ-ಟೆಟ್ ವಿಷಯಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಹೊರಡಿಸಿದ ಆದೇಶದಲ್ಲಿ ಭಾರತದ ಲಕ್ಷ ಗಟ್ಟಲೆ ಅಧ್ಯಾಪಕರಲ್ಲಿ ಉಂಟಾದ ಗೊಂದಲಕ್ಕೆ ಅತಿ ಶೀಘ್ರದಲ್ಲೇ ಪರಿಹಾರವನ್ನುಂಟುಮಾಡುವ ಹಿನ್ನೆಲೆಯಲ್ಲಿ ದೇಶೀಯ ಅಧ್ಯಾಪಕ ಪರಿಷತ್ ಕಾಸರಗೋಡು ಜಿಲ್ಲಾ ಸಮಿತಿಯು ಪ್ರದಾನಮಂತ್ರಿಗೆ ಮನವಿ ನೀಡಿ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿದೆ.
2025 ಸೆಪ್ಟೆಂಬರ್ 1 ರಂದು ಸುಪ್ರೀಂ ಕೋರ್ಟ್ ಹೊರಡಿಸಿದ ಆದೇಶದ ಪ್ರಕಾರ ಪ್ರಸ್ತುತ ಸೇವೆಯಲ್ಲಿರುವ ಎಲ್ಲ ಅಧ್ಯಾಪಕರು ಕೆ - ಟೆಟ್ ಪರೀಕ್ಷೆ ಉತ್ತೀರ್ಣರಾಗಿರಬೇಕು. ಆದರೆ 2009 ರ ಆರ್.ಟಿ.ಇ ಆಕ್ಟ್ ಪ್ರಕಾರ, 2010 ರ ಮೊದಲು ಸೇವೆಗೆ ಸೇರಿದವರಿಗೆ ರಿಯಾಯಿತಿ ನೀಡಲಾಗಿತ್ತು. 2010 ಮತ್ತು 2014 ರ ಮಧ್ಯೆ ಸೇವೆಗೆ ಸೇರಿದವರಿಗೆ ಕೇರಳದಲ್ಲಿ ಪ್ರತ್ಯೇಕ ರಿಯಾಯಿತಿ ನೀಡಲಾದ ಕಾರಣ ಆ ಸಮಯದಲ್ಲಿ ಸೇವೆಗೆ ಸೇರಿದವರು ಟೆಟ್ ಪರೀಕ್ಷೆ ಬರೆಯಲಿಲ್ಲ.ಕೆರಳದಲ್ಲಿರುವ ಈ ಅವಸ್ಥೆಯನ್ನು ಗಮನಿಸಬೇಕೆಂದು ಮನವಿಯಲ್ಲಿ ಸೂಚಿಸಲಾಗಿದೆ. ಉನ್ನತ ಯೋಗ್ಯತೆಗಳಾದಂತಹ ನೆಟ್,ಸೆಟ್, ಪಿ ಎಚ್ ಡಿ ಯೋಗ್ಯತೆಗಳಿರುವವರಿಗೂ ರಿಯಾಯಿತಿ ನೀಡಬೇಕೆಂದು ದೇಶೀಯ ಅಧ್ಯಾಪಕ ಪರಿಷತ್ ಮನವಿ ಮಾಡಿದೆ. ದೇಶದಾದ್ಯಂತ ಎ. ಬಿ.ಆರ್.ಎಸ್.ಎಂ ನ ನೇತೃತ್ವದಲ್ಲಿ ನಡೆಯುವ ಪ್ರಚಾರದ ಅಂಗವಾಗಿ ಎಲ್ಲ ಜಿಲ್ಲಾ ಸಮಿತಿಗಳು ಮನವಿ ಪತ್ರ ನೀಡಲಾಯಿತು.
ಕಾಸರಗೋಡು ಜಿಲ್ಲಾಧಿಕಾರಿಗಳಾದ ಕೆ. ಇನ್ಬಾಶೇಖರನ್ ಅವರಿಗೆ ದೇಶೀಯ ಅಧ್ಯಾಪಕ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಟಿ ಕೃಷ್ಣನ್ ವರು ಮನವಿ ಪತ್ರವನ್ನು ನೀಡಿದರು. ರಾಜ್ಯ ವನಿತಾ ವಿಭಾಗ ಜೊತೆ ಕಾರ್ಯದರ್ಶಿ ಎ.ಸುಚಿತ, ಜಿಲ್ಲಾ ಸಮಿತಿ ಸದಸ್ಯರಾದ ಚಂದ್ರಿಕಾ ಕೆ.ಆರ್. ಮತ್ತು ದೇವೀಪ್ರಸಾದ್ ಅವರು ಜೊತೆಗಿದ್ದರು.




.jpg)
