HEALTH TIPS

ಸಿ.ಪಿ ರಾಧಾಕೃಷ್ಣನ್: ಕೊಯಮತ್ತೂರಿನಿಂದ ನವದೆಹಲಿವರೆಗೆ...

ಚೆನ್ನೈ: ತಮಿಳುನಾಡಿನ ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್‌ (68) ಅವರು ದೇಶದ 15ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. 

ಈ ಉನ್ನತ ಸ್ಥಾನಕ್ಕೆ ರಾಜ್ಯದಿಂದ ಆಯ್ಕೆಯಾದ ಮೂರನೇ ವ್ಯಕ್ತಿ ಎಂಬ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ. ಇವರಿಗೂ ಮುನ್ನ ಸರ್ವಪಲ್ಲಿ ರಾಧಾಕೃಷ್ಣನ್‌ (1962) ಮತ್ತು ಆರ್‌.ವೆಂಕಟರಾಮನ್‌ (1987) ಅವರು ಉಪರಾಷ್ಟ್ರಪತಿಯಾಗಿ ತಮಿಳುನಾಡಿನಿಂದ ಆಯ್ಕೆಯಾಗಿದ್ದರು. ಈ ಇಬ್ಬರೂ ಆನಂತರ ರಾಷ್ಟ್ರಪತಿಗಳಾಗಿ ಆಯ್ಕೆಯಾಗಿದ್ದರು. ಇದೇ ರೀತಿಯ ಅವಕಾಶ ಸಿ.ಆರ್‌.ರಾಧಾಕೃಷ್ಣನ್‌ ಅವರಿಗೂ ಲಭಿಸುವುದೇ ಎನ್ನುವುದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅವಧಿ (2027) ಮುಗಿದ ಬಳಿಕವಷ್ಟೇ ತಿಳಿಯಲಿದೆ.

ರಾಧಾಕೃಷ್ಣನ್‌ ಅವರು ಮಹಾರಾಷ್ಟ್ರದ ರಾಜ್ಯಪಾಲರಾಗಿ ನೇಮಕ ಆಗುವುದಕ್ಕೂ ಮುನ್ನ ಜಾರ್ಖಂಡ್‌ ತೆಲಂಗಾಣದ ರಾಜ್ಯಪಾಲರಾಗಿ ಮತ್ತು ಪುದುಚೇರಿಯ ಲೆಫ್ಟಿನೆಂಟ್‌ ಗೌವರ್ನರ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ತಮಿಳುನಾಡಿನ ತಿರುಪ್ಪೂರ್‌ನಲ್ಲಿ 1957ರ ಮೇ 4ರಂದು ಅವರು ಜನಿಸಿದರು.

16ನೇ ವಯಸ್ಸಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸ್ವಯಂ ಸೇವಕರಾದರು. ವ್ಯವಹಾರ ಆಡಳಿತದಲ್ಲಿ ಪದವಿ ಪಡೆದ ಅವರು 1974ರಲ್ಲಿ ಭಾರತೀಯ ಜನಸಂಘದ ರಾಜ್ಯ ಘಟಕದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದರು.

1996ರಲ್ಲಿ ಅವರು ತಮಿಳುನಾಡಿನ ಬಿಜೆಪಿ ಘಟಕದ ಕಾರ್ಯದರ್ಶಿಯಾಗಿ ನೇಮಕ ಆದರು. 1998ರಲ್ಲಿ ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾಗಿ ಸಂಸತ್‌ ಪ್ರವೇಶಿಸಿದರು. 1998ರಲ್ಲಿ ಅವರು ಮರು ಆಯ್ಕೆಯಾದರು. ಅವರು ತಮಿಳುನಾಡಿನಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ಪ್ರಬಲವಾದ ಕೊಂಗು ವೆಲ್ಲಲಾರ್‌ ಗೌಂಡರ್‌ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

2004ರಿಂದ 2007ರ ಅವಧಿಯಲ್ಲಿ ಅವರು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ 93 ದಿನಗಳವರೆಗೆ ನಡೆದ 'ರಥಯಾತ್ರೆ' 19000 ಕಿ.ಮೀ. ಕ್ರಮಿಸಿ ಜನಮನ್ನಣೆ ಪಡೆಯಿತು. ಭಯೋತ್ಪಾದನೆ ನಿರ್ಮೂಲನೆ ನದಿಗಳ ಜೋಡಣೆ ಏಕರೂಪ ನಾಗರಿಕ ಸಂಹಿತೆ ಜಾರಿ ಅಸ್ಪೃಶ್ಯತೆ ನಿವಾರಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಈ ಯಾತ್ರೆಯಲ್ಲಿ ಪ್ರತಿಪಾದಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries