HEALTH TIPS

ಮಾತಾ ಅಮೃತಾನಂದಮಯಿ ಜನ್ಮದಿನ- ಕೇರಳ ಸರ್ಕಾರ ಸನ್ಮಾನ!

ಕೊಲ್ಲಂ: ಮಲಯಾಳಂ ಭಾಷೆ ಮತ್ತು ಸಂಸ್ಕೃತಿಯ ಶಕ್ತಿಯನ್ನು ಇಡೀ ಜಗತ್ತಿಗೆ ತೋರಿಸಿದ ಮಾತಾ ಅಮೃತಾನಂದಮಯಿ ಅವರಿಗೆ ಕೇರಳ ಸರ್ಕಾರ ಶುಕ್ರವಾರ ಸನ್ಮಾನಿಸಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸಭಾಂಗಣದಲ್ಲಿ ಮಲಯಾಳಂನಲ್ಲಿ ಭಾಷಣದ ಮಾಡಿದ ಬೆಳ್ಳಿ ಮಹೋತ್ಸವ ಸಮಾರಂಭದಲ್ಲಿ ಕೇರಳ ಸರ್ಕಾರ ಮಾತಾ ಅಮೃತಾನಂದಮಯಿ ಅವರನ್ನು ಸನ್ಮಾನಿಸಿದೆ.

ಕೇರಳ ರಾಜ್ಯ ಸರ್ಕಾರದ ಪರವಾಗಿ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸಾಜಿ ಚೆರಿಯನ್ ಅವರು ಗೌರವ ಪ್ರದಾನ ಮಾಡಿದರು.

ಬಳಿಕ ಮಾತನಾಡಿದ ಅವರು, ಮಾತಾ ಅಮೃತಾನಂದಮಯಿ ಅವರು ಮಲಯಾಳಂ ಭಾಷೆ ಮತ್ತು ಸಂಸ್ಕೃತಿಯ ಶಕ್ತಿಯನ್ನು ಇಡೀ ಜಗತ್ತಿಗೆ ತೋರಿಸಿದ್ದಾರೆ. ಇದು ಜಾಗತಿಕ ವೇದಿಕೆಯಲ್ಲಿ ಮಾತೃಭಾಷೆಯನ್ನು ನಿರ್ಲಕ್ಷಿಸುವವರಿಗೆ ಪ್ರಬಲ ಸಂದೇಶವಾಗಿತ್ತು. ಇದು ಕೇವಲ ಸನ್ಮಾನವಲ್ಲ - ಇದು ಸಾಂಸ್ಕೃತಿಕ ಜಾಗೃತಿ ಎಂದು ಹೇಳಿದರು. ಇದೇ ವೇಳೆ ಕೇರಳ ಮುಖ್ಯಮಂತ್ರಿಗಳು ತಮ್ಮ ಗೌರವ ಹಾಗೂ ಶುಭಾಶಯಗಳನ್ನು ತಿಳಿಸಿರುವುದಾಗಿ ತಿಳಿಸಿದರು.

ನಂತರ ಮಾತನಾಡಿದ ಮಾತಾ ಅಮೃತಾನಂದಮಯಿ ಅವರು, ಗೌರವವನ್ನು ಮಲಯಾಳಂ ಭಾಷೆಗೆ ಅರ್ಪಿಸಿದರು. ಈ ಪ್ರಶಸ್ತಿ ಮಲಯಾಳಂಗೆ ಸೇರಿದ್ದು, ನಮ್ಮ ಭಾಷೆ ನಮಗೆ ಗುರುತು ಮತ್ತು ರೂಪ ನೀಡಿದೆ. ಪೋಷಕರು ತಮ್ಮ ಮಕ್ಕಳಿಗೆ ತಮ್ಮ ಮಾತೃಭಾಷೆಯ ಬಗ್ಗೆ ಹೆಮ್ಮೆ ಪಡುವಂತೆ ಮತ್ತು ಅದನ್ನು ಸಂರಕ್ಷಿಸುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು. ಬಳಿಕ ಶಾಸಕರಾದ ಸಿ.ಆರ್. ಮಹೇಶ್ ಮತ್ತು ಉಮಾ ಥಾಮಸ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕೇರಳ ರಾಜ್ಯ ಬಿಜೆಪಿ ಉಪಾಧ್ಯಕ್ಷ ಡಾ. ಕೆ.ಎಸ್. ರಾಧಾಕೃಷ್ಣನ್, ಐಜಿ ಜಿ. ಲಕ್ಷ್ಮಣ್, ಕೇರಳ ಕಾನೂನು ಅಕಾಡೆಮಿ ನಿರ್ದೇಶಕ ನಾಗರಾಜ್ ನಾರಾಯಣನ್, ನಟ ದೇವನ್ ಮತ್ತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸಿಇಒ ಲಕ್ಷ್ಮಿ ಮೆನನ್ ಈ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries