HEALTH TIPS

ಯುದ್ಧವನ್ನು ತ್ವರಿತವಾಗಿ ಕೊನೆಗೊಳಿಸುವ ಬಗ್ಗೆ ಜಗತ್ತು ಭಾರತದಿಂದ ಕಲಿಯಬೇಕು: IAF ಮುಖ್ಯಸ್ಥ

ನವದೆಹಲಿ: ಭಾರತ ಆಪರೇಷನ್ ಸಿಂಧೂರ್ ಅನ್ನು ನಿರ್ವಹಿಸಿದ ರೀತಿಯಿಂದ ಜಗತ್ತು ಪಾಠ ಕಲಿಯಬೇಕು ಮತ್ತು ಸಂಘರ್ಷಗಳನ್ನು ತ್ವರಿತವಾಗಿ ಪ್ರಾರಂಭಿಸಬೇಕು ಮತ್ತು ಕೊನೆಗೊಳಿಸಬೇಕು ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಎಪಿ ಸಿಂಗ್ ಅವರು ಶುಕ್ರವಾರ ಹೇಳಿದ್ದಾರೆ.

ನಿನ್ನೆ ವಾಯುಪಡೆಯ ಸಂಘ ಆಯೋಜಿಸಿದ್ದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸಿಂಗ್, "ಜಗತ್ತು ಸಾಧ್ಯವಾದಷ್ಟು ಬೇಗ ಸಂಘರ್ಷವನ್ನು ಹೇಗೆ ಪ್ರಾರಂಭಿಸಬೇಕು ಮತ್ತು ಕೊನೆಗೊಳಿಸಬೇಕು ಎಂಬುದನ್ನು ಭಾರತದಿಂದ ಕಲಿಯಬೇಕು ಎಂದು ನಾನು ಭಾವಿಸುತ್ತೇನೆ..." ಎಂದರು.

ದೀರ್ಘಕಾಲದ ಯುದ್ಧಗಳು ಸನ್ನದ್ಧತೆಯನ್ನು ಬರಿದುಮಾಡುತ್ತವೆ, ಆರ್ಥಿಕತೆಗೆ ಹಾನಿ ಮಾಡುತ್ತವೆ ಮತ್ತು ರಾಷ್ಟ್ರೀಯ ಪ್ರಗತಿಗೆ ಅಡ್ಡಿಯಾಗುತ್ತವೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಭಾರತದ ಗುರಿ ಭಯೋತ್ಪಾದನಾ ವಿರೋಧಿ ಕ್ರಮ ಎಂದು ನೆನಪಿಸಿಕೊಂಡ ಅವರು, ಯುದ್ಧವನ್ನು ದೀರ್ಘಕಾಲದವರೆಗೆ ಮುಂದುವರಿಸುವುದು ಆರ್ಥಿಕ ನಷ್ಟವಲ್ಲದೆ ಸನ್ನದ್ಧತೆ ಮತ್ತು ಅಭಿವೃದ್ಧಿಯನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದರು.

"ಇಂದು ನಡೆಯುತ್ತಿರುವ ಪ್ರಮುಖ ಯುದ್ಧಗಳು, ಅದು ರಷ್ಯಾ, ಉಕ್ರೇನ್ ಅಥವಾ ಇಸ್ರೇಲ್ ಯುದ್ಧವಾಗಿರಬಹುದು. ಅವು ವರ್ಷಗಳಿಂದ ನಡೆಯುತ್ತಿವೆ. ಏಕೆಂದರೆ ಯಾರೂ ಸಂಘರ್ಷ ಮುಕ್ತಾಯದ ಬಗ್ಗೆ ಯೋಚಿಸುತ್ತಿಲ್ಲ... ನಾವು ಸಹ ಇನ್ನೂ ಸ್ವಲ್ಪ ಹೆಚ್ಚು ದಿನ ಯುದ್ಧ ಮಾಡಬೇಕಾಗಿತ್ತು ಎಂದು ಜನ ಹೇಳುವುದನ್ನು ನಾವು ಕೇಳಿದ್ದೇವೆ. ಆದರೆ ನಾವು ಯುದ್ಧವನ್ನು ಬಹಳ ಬೇಗನೆ ನಿಲ್ಲಿಸಿದ್ದೇವೆ" ಎಂದು IAF ಮುಖ್ಯಸ್ಥರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries