HEALTH TIPS

ಸಜಿತಾ ಕೊಲೆ ಪ್ರಕರಣದ ಆರೋಪಿ ಚೆಂತಾಮರ ತಪ್ಪಿತಸ್ಥ; 16 ರಂದು ಶಿಕ್ಷೆ ಪ್ರಕಟ

ಪಾಲಕ್ಕಾಡ್: ನೆನ್ಮಾರ ಪೋತುಂಡಿ ಸಜಿತಾ ಕೊಲೆ ಪ್ರಕರಣದಲ್ಲಿ ಆರೋಪಿ ಚೆಂತಾಮರ ತಪ್ಪಿತಸ್ಥ ಎಂದು ಪಾಲಕ್ಕಾಡ್ ನಾಲ್ಕನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಇಂದು ತೀರ್ಪು ನೀಡಿದೆ. ಕೊಲೆಯಾದ ಆರು ವರ್ಷಗಳ ನಂತರ ನ್ಯಾಯಾಲಯವು ವಿಚಾರಣಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ತೀರ್ಪು ನೀಡಿದೆ. ಪ್ರಕರಣದಲ್ಲಿ ಸಾಂದರ್ಭಿಕ ಸಾಕ್ಷ್ಯಗಳು ಮತ್ತು ಆರೋಪಿಯ ಪತ್ನಿ ಸೇರಿದಂತೆ ಐವತ್ತು ಸಾಕ್ಷಿಗಳ ಹೇಳಿಕೆಗಳು ನಿರ್ಣಾಯಕವಾಗಿದ್ದವು.

ಸಜಿತಾ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ರಿಮಾಂಡ್‌ನಲ್ಲಿರುವಾಗ ಚೆಂತಾಮರ ಮಾಡಿದ ಜೋಡಿ ಕೊಲೆ ಕೇರಳವನ್ನು ಬೆಚ್ಚಿಬೀಳಿಸಿತ್ತು. ಆಗಸ್ಟ್ 31, 2019 ರಂದು, ನೆನ್ಮಾರ ಪೋತುಂಡಿಯ  ಚೆಂತಾಮರ ಎಂಬ ವ್ಯಕ್ತಿ ಸಜಿತಾ ಅವರನ್ನು  ಕಡಿದು ಕೊಲೆಗ್ಯೆದಿದ್ದ. ತನ್ನ ಪತ್ನಿ ಜಗಳವಾಗಿ ಮನೆಬಿಟ್ಟು ತೆರಳಲು ಸಜಿತಾಳೇ ಕಾರಣ ಎಂಬ ಅನುಮಾನದ ಮೇಲೆ ಈ ಕ್ರೂರ ಕೊಲೆ ಮಾಡಲಾಗಿತ್ತು

ಚೆಂತಾಮರ ವಿರುದ್ಧದ ಎಲ್ಲಾ ಆರೋಪಗಳು ಸಾಬೀತಾಗಿದೆ. ಪ್ರಕರಣದ ಶಿಕ್ಷೆಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು. ತೀರ್ಪನ್ನು ಕೇಳಲು ಸಜಿತಾ ಅವರ ಮಕ್ಕಳಾದ ಅತುಲ್ಯ ಮತ್ತು ಅಖಿಲಾ ನ್ಯಾಯಾಲಯಕ್ಕೆ ಆಗಮಿಸಿದ್ದರು. ಆರೋಪಿ ಚೆಂತಾಮರನನ್ನು ಬೆಳಿಗ್ಗೆ 10.45 ರ ಹೊತ್ತಿಗೆ ನ್ಯಾಯಾಲಯಕ್ಕೆ ಕರೆತರಲಾಯಿತು. ಇದಕ್ಕೂ ಮೊದಲು, ಅತುಲ್ಯಾ ಮತ್ತು ಅಖಿಲಾ ಆರೋಪಿಯನ್ನು ಬಿಡುಗಡೆ ಮಾಡಿದರೆ, ತಮ್ಮ ಜೀವಕ್ಕೆ ಅಪಾಯವಿದೆ ಮತ್ತು  ಶಾಂತಿಯುತವಾಗಿ ಬದುಕಲು ಸಾಧ್ಯವಿಲ್ಲ. ಅವನಿಗೆ ಗರಿಷ್ಠ ಶಿಕ್ಷೆಯಾಗಬೇಕು ಎಂದು ಹೇಳಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries