HEALTH TIPS

ದೇವರ ನ್ಯೆವೇದ್ಯದ ಮೊದಲೇ ಆಹಾರ ಸೇವಿಸಿದ ಸಚಿವರು: ; ಅರನ್ಮುಲದಲ್ಲಿ ಸಂಪ್ರದಾಯ ಉಲ್ಲಂಘನೆ; ಲೋಪ ಪರಿಹರಿಸಲು ತಂತ್ರಿಯಿಂದ ಪತ್ರ

ಪತ್ತನಂತಿಟ್ಟ: ಅರನ್ಮುಲ ಅಷ್ಟಮಿರೋಹಿಣಿ ವಲ್ಲ ಸದ್ಯದಲ್ಲಿ ಸಂಪ್ರದಾಯ ಉಲ್ಲಂಘನೆಯಾಗಿದೆ ಎಂದು ತಂತ್ರಿ ಹೇಳಿದ್ದಾರೆ. ದೇವರಿಗೆ ನ್ಯೆವೇದ್ಯ  ಅರ್ಪಿಸುವ ಮೊದಲು ಸಚಿವರಿಗೆ ಆಹಾರವನ್ನು ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಂಪ್ರದಾಯ ಉಲ್ಲಂಘನೆಯಾಗಿದೆ ಮತ್ತು ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ತಂತ್ರಿಯಿಂದ ದೇವಸ್ವಂ ಮಂಡಳಿಗೆ ಪತ್ರ ಬಂದಿದೆ.

ದೇವಾಲಯ ಸಲಹಾ ಸಮಿತಿಯ ಸದಸ್ಯರು, ಆಡಳಿತ ಉಸ್ತುವಾರಿ ವಹಿಸಿರುವ ದೇವಸ್ವಂ ಸಹಾಯಕ ಆಯುಕ್ತರು ಮತ್ತು ದೇವಸ್ವಂ ಆಡಳಿತಾಧಿಕಾರಿ ಸೇರಿದಂತೆ ಅಷ್ಟಮಿರೋಹಿಣಿ ವಲ್ಲ ಸದ್ಯದ ಸಂಘಟಕರಾದ ಇಡೀ ಪಳ್ಳಿಯೋಡ ಸೇವಾ ಸಂಘವು ದೇವರ ಮುಂದೆ ಪ್ರಾಯಶ್ಚಿತ್ತ ಮಾಡಲು ಸೂಚಿಸಲಾಗಿದೆ.

ಇದನ್ನು ಸಾರ್ವಜನಿಕವಾಗಿ ಮಾಡಬೇಕು ಎಂದು ಪತ್ರವು ಸೂಚಿಸುತ್ತದೆ. 11 ಸೇರು ಅಕ್ಕಿಯ ಊಟವನ್ನು ಬಡಿಸಬೇಕು. ತಿಡಪ್ಪಲ್ಲಿಯಲ್ಲಿ ಒಂದು ಸೇರು ಅಕ್ಕಿ ಮತ್ತು ನಾಲ್ಕು ಪದಾರ್ಥ ತಯಾರಿಸಿ ನ್ಯೆವೇದ್ಯ ನಿಉಡಬೇಕು. ದೇವರಿಗೆ ಆಹಾರವನ್ನು ಅರ್ಪಿಸಿದ ನಂತರ, ಅದನ್ನು ಎಲ್ಲರಿಗೂ ಬಡಿಸಬೇಕು. ತಂತ್ರಿ ಪರಮೇಶ್ವರನ್ ವಾಸುದೇವನ್ ಭಟ್ಟತಿರಿಪಾದ್ ಅವರು ದೇವಸ್ವಂ ಮಂಡಳಿಗೆ ಕಳುಹಿಸಿದ ಪತ್ರದಲ್ಲಿ, ಇಂತತ ತಪ್ಪು ಇನ್ನು ನಡೆಯುವುದಿಲ್ಲ ಎಂದು ಪ್ರಮಾಣ ಮಾಡಬೇಕೆಂದು ಹೇಳಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries