HEALTH TIPS

ವಯನಾಡ್ ಪುನರ್ವಸತಿ: ₹2,221.03 ಕೋಟಿ ಬಿಡುಗಡೆಗೆ ಪ್ರಧಾನಿಗೆ ಕೇರಳ ಸಿಎಂ ಮನವಿ

 ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂದು (ಶುಕ್ರವಾರ) ಭೇಟಿ ಮಾಡಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಯನಾಡ್ ಭೂಕುಸಿತದ ಪುನರ್ವಸತಿಗಾಗಿ ₹2,221.03 ಕೋಟಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೇಂದ್ರದ ನೆರವಿಗೂ ಮನವಿ ಸಲ್ಲಿಸಿದ್ದಾರೆ. 


ರಾಷ್ಟ್ರ ರಾಜಧಾನಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಪಿಣರಾಯಿ, ಪ್ರಧಾನಿ ಅವರೊಂದಿಗೆ ಪ್ರಮುಖ ವಿಷಯಗಳ ಕುರಿತು ಚರ್ಚಿಸಲಾಯಿತು ಎಂದು ತಿಳಿಸಿದ್ದಾರೆ.

ವಯನಾಡ್ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಕಾರ್ಯ ಜೊತೆಗೆ ರಾಜ್ಯದಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪನೆ ಹಾಗೂ ರಾಜ್ಯದ ಸಾಲ ಮಿತಿ ಹೆಚ್ಚಿಸುವ ಕುರಿತು ಚರ್ಚಿಸಲಾಯಿತು ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್) ₹2,221.03 ಕೋಟಿ ಬಿಡುಗಡೆಗೆ ಪ್ರಧಾನಿಯನ್ನು ಕೇರಳ ಸಿಎಂ ಕೋರಿದ್ದಾರೆ.

ವಯನಾಡ್ ಪುನರ್ವಸತಿ ವಿಷಯದಲ್ಲಿ ಕೇರಳದ ಆಡಳಿತ ಎಡರಂಗ ಹಾಗೂ ಬಿಜೆಪಿ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು.

ಕೋಯಿಕ್ಕೋಡ್‌ನಲ್ಲಿ ಏಮ್ಸ್ ಸ್ಥಾಪನೆಗೆ ಅನುಮೋದನೆ ನೀಡುವಂತೆಯೂ ಪಿಣರಾಯಿ ಮನವಿ ಮಾಡಿದ್ದು, ಇದು ಕೇರಳ ಜನತೆಯ ಬಹುಕಾಲದ ಬೇಡಿಕೆಯಾಗಿದೆ ಎಂದು ತಿಳಿಸಿದ್ದಾರೆ. ಈ ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೂ ಪಿಣರಾಯಿ ವಿಜಯನ್ ಚರ್ಚಿಸಿದ್ದರು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries