HEALTH TIPS

ಕುಂಬಳೆ ಪೇಟೆಯ ಸಂಚಾರ ದಟ್ಟಣೆ ನಿಯಂತ್ರಿಸಲು ಹೊಸ ಪ್ರಾಯೋಗಿಕ ಕ್ರಮಗಳು ಶೀಘ್ರ ಜಾರಿಗೆ

ಕುಂಬಳೆ: ಕುಂಬಳೆ ಪೇಟೆಯ ಸಂಚಾರ ದಟ್ಟಣೆ ನಿಯಂತ್ರಿಸಲು ಹೊಸ ಸಂಚಾರ ಸುಧಾರಣೆಯನ್ನು ಪರೀಕ್ಷಿಸಲಾಗುತ್ತಿದೆ. ಸೋಮವಾರದಿಂದಲೇ ಹೊಸ ಕ್ರಮ ಪ್ರಾರಂಭವಾಗಲಿದೆ ಎಂದು ಕುಂಬಳೆ ಗ್ರಾಮ ಪಂಚಾಯತಿ ಆಡಳಿತ ಸಮಿತಿ ತಿಳಿಸಿದ್ದರೂ, ಕುಂಬಳೆ ಶಾಲಾ ಕಲೋತ್ಸವ ವಿವಾದ ಸಂಬಂಧಿಸಿದಂತೆ ಪೋಲೀಸರು ಕರ್ತವ್ಯದಲ್ಲಿದ್ದ ಕಾರಣ ಅದನ್ನು ಕೆಲವು ದಿನಗಳ ವರೆಗೆ ಮುಂದೂಡಲಾಗಿದೆ. ಜೊತೆಗೆ ಸುಧಾರಣಾ ಕ್ರಮದ ಪೂರ್ವ ವ್ಯವಸ್ಥೆಗಳು ನಡೆಯುತ್ತಿದೆ.  


ಸಂಚಾರ ಸುಧಾರಣೆಯ ಭಾಗವಾಗಿ, ಆಟೋರಿಕ್ಷಾಗಳಿಗೆ ಹೆಚ್ಚಿನ ಪಾರ್ಕಿಂಗ್ ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಸರಕು ವಾಹನಗಳಿಗೂ ಪಾರ್ಕಿಂಗ್ ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಕೆಎಸ್‍ಟಿಪಿ ಬದಿಯಡ್ಕ ರಸ್ತೆಯಲ್ಲಿ ಕೆಎಸ್‍ಆರ್‍ಟಿಸಿ ಬಸ್‍ಗಳು ಮತ್ತು ಖಾಸಗಿ ಬಸ್‍ಗಳಿಗೆ ಬಸ್ ನಿಲ್ದಾಣವನ್ನು ಬದಲಾಯಿಸಿ ಪಾರ್ಕಿಂಗ್ ಸ್ಥಳವನ್ನು ನಿಗದಿಪಡಿಸಲಾಗಿದೆ.

ಹೊಸದಾಗಿ ನಿರ್ಮಿಸಲಾದ ಆರು ಬಸ್ ಶೆಲ್ಟರ್‍ಗಳನ್ನು ಇದಕ್ಕಾಗಿ ಬಳಸಲಾಗುವುದು. ಬದಿಯಡ್ಕ ರಸ್ತೆಯ ಎರಡೂ ಬದಿಗಳಲ್ಲಿ ಬಸ್ ಪಾರ್ಕಿಂಗ್ ಸೌಲಭ್ಯಗಳನ್ನು ಒದಗಿಸಲಾಗಿದೆ.

ಸಂಚಾರ ಸುಧಾರಣೆಯನ್ನು ಪ್ರಾಯೋಗಿಕ ಆಧಾರದ ಮೇಲೆ ಜಾರಿಗೆ ತರಲಾಗುತ್ತಿದ್ದರೂ, ಅದು ಯಶಸ್ವಿಯಾದರೆ ಶಾಶ್ವತ ಕ್ರಮಾಗಿ ಬಳಸಲು ಪಂಚಾಯತಿ ಆಡಳಿತ ಸಮಿತಿ ನಿರ್ಧರಿಸಿದೆ.


-ವಾಹನ ದಟ್ಟಣೆಯಿಂದ ಉಂಟಾಗುತ್ತಿರುವ ಸಮಸ್ಯೆ ಪರಿಹರಿಸಲು ಪ್ರಾಯೋಗಿಕ ನೆಲೆಯಲ್ಲಿ ವ್ಯವಸ್ಥೆ ರೂಪಿಸಲಾಗಿದೆ. ಇದು ಯಶಸ್ವಿಯಾದರೆ ಕೆಲವು ಮಾರ್ಪಾಟುಗಳೊಂದಿಗೆ ಬಳಿಕ ಶಾಶ್ವತ ವ್ಯವಸ್ಥೆಯಾಗಿಸಲಾಗುವುದು. ವಾಹನ ಚಾಲಕರು, ವ್ಯಾಪಾರಿಗಳು, ಸಾರ್ವಜನಿಕರು, ಪ್ರಯಾಣಿಕರು ಸಹಕರಿಸಬೇಕಿದೆ.

-ನಾಸರ್ ಮೊಗ್ರಾಲ್

ಉಪಾಧ್ಯಕ್ಷರು. ಕುಂಬಳೆ ಗ್ರಾಮ ಪಂಚಾಯತಿ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries