ಕೊಟ್ಟಾಯಂ: ಸೇತುವೆ ನಿರ್ವಹಣೆಯಿಂದಾಗಿ ಚಂಗನಶ್ಶೇರಿ-ಕೊಟ್ಟಾಯಂ ರೈಲು ಮಾರ್ಗದಲ್ಲಿ ಸಂಚಾರ ನಿಬರ್ಂಧಗಳನ್ನು ವಿಧಿಸಲಾಗಿದೆ. ಅಕ್ಟೋಬರ್ 11 ರಂದು ರಾತ್ರಿ 09:05 ಕ್ಕೆ ಕೊಲ್ಲಂನಿಂದ ಹೊರಡಬೇಕಿದ್ದ ಕೊಲ್ಲಂ-ಎರ್ನಾಕುಳಂ ಮೆಮು ರದ್ದುಗೊಂಡಿದೆ. ಕೊಲ್ಲಂ ಮತ್ತು ಗುರುವಾಯೂರ್ ನಡುವಿನ ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ. ನಾಲ್ಕು ರೈಲುಗಳು ಅಲಪ್ಪುಳ ಮೂಲಕ ತಿರುಗಿ ಸಂಚರಿಸಲಿದೆ.
ಮಧುರ ಜಂಕ್ಷನ್ ಗುರುವಾಯೂರ್ ಎಕ್ಸ್ಪ್ರೆಸ್ 11 ರಂದು ಕೊಲ್ಲಂನಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ. ಗುರುವಾಯೂರ್ ಮಧುರೈ ಎಕ್ಸ್ಪ್ರೆಸ್ 12 ರಂದು ಕೊಲ್ಲಂನಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಲಿದೆ. ಕೊಟ್ಟಾಯಂ ನಿಲಂಬೂರ್ ಎಕ್ಸ್ಪ್ರೆಸ್ ಎಟ್ಟುಮನೂರಿನಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಲಿದೆ. ತಿರುವನಂತಪುರಂ ಉತ್ತರ - ಎಸ್.ಎಂ.ವಿ.ಟಿ. ಬೆಂಗಳೂರು ಹಮ್ಸಫರ್. ಎಕ್ಸ್ಪ್ರೆಸ್, ಕನ್ಯಾಕುಮಾರಿ-ದಿಬ್ರುಗಢ ಸೂಪರ್ಫಾಸ್ಟ್ ಎಕ್ಸ್ಪ್ರೆಸ್, ತಿರುವನಂತಪುರಂ ಮಧುರೈ ಅಮೃತ ಎಕ್ಸ್ಪ್ರೆಸ್ ಮತ್ತು ಮಂಗಳೂರು ಎಕ್ಸ್ಪ್ರೆಸ್ ರೈಲುಗಳನ್ನು ಅಲಪ್ಪುಳ ಮೂಲಕ ತಿರುಗಿ ಸಂಚರಿಸಲಿದೆ.




